ಪ್ರಧಾನಿಯವರ ರಾಜ್ಯ ಭೇಟಿಯಿಂದ ಬೆಂಗಳೂರು ಮತ್ತು ಮೈಸೂರಿನಲ್ಲಿ ಕೆಲವು ರಸ್ತೆಗಳಿಗೆ ಡಾಂಬರು ಹಾಕಿ, ಸ್ವಚ್ಛಗೊಳಿಸಿ ಮಿಂಚಿನಂತೆ ಹೊಳೆಯುವ ಹಾಗೆ ಮಾಡಿದ್ದನ್ನು ನೋಡಿದ ಕೆಲವರಿಗೆ ಖುಷಿಯೋ- ಖುಷಿ. ಏಕೆಂದರೆ, ಪ್ರಧಾನಿಯವರು ಆಗಾಗ್ಗೆ ರಾಜ್ಯಕ್ಕೆ ಬಂದರೆ ರಸ್ತೆಗಳು ಗುಂಡಿಮುಕ್ತವಾಗಿರುತ್ತವೆ ಎಂದು. ನಿಜವೆಂದರೆ, ಪ್ರಧಾನಿಯವರೂ ಒಮ್ಮೆ ರಾಜ್ಯವೊಂದರಲ್ಲಿ ಶಾಸಕ, ಮಂತ್ರಿ, ಮುಖ್ಯಮಂತ್ರಿ ಸ್ಥಾನದಲ್ಲಿದ್ದವರೇ ಅಲ್ಲವೆ? ಅವರಿಗೆ ತಾತ್ಕಾಲಿಕವಾಗಿ ಚುರುಕಾಗುವ ಆಡಳಿತಯಂತ್ರದ ಬಗ್ಗೆ ತಿಳಿಯದ ವಿಚಾರವೇನಲ್ಲ? ಪ್ರಧಾನಿಯವರು ಆಗಾಗ್ಗೆ ರಾಜ್ಯಕ್ಕೆ ಬರಲಿ. ಆದರೆ, ಅವರು ಬರುವಾಗ ‘ಟ್ವೀಟ್ ಮಾಡದೇ’ ಮಾರುವೇಷದಲ್ಲಿ (ಭದ್ರತೆಯನ್ನು ಕಡೆಗಣಿಸದಂತೆ) ರಾಜ್ಯಕ್ಕೆ ಆಗಾಗ್ಗೆ ಬಂದು ಹೋದರೆ ಅವರಿಗೆ ಇಲ್ಲಿನ ರಸ್ತೆಗಳ ನಿಜ ಸ್ಥಿತಿ ತಿಳಿಯುತ್ತದೆ. ಆಗ ರಾಜ್ಯದ ಆಡಳಿತ ಸದಾ ಚುರುಕಾಗಿರುತ್ತದೆ ಅಲ್ಲವೇ?