ಕೆಲವು ದೇವಾಲಯಗಳ ಹುಂಡಿಗಳಲ್ಲಿ ನಿಷೇಧಿತ ನೋಟುಗಳ ಬೃಹತ್ ಪ್ರಮಾಣದ ಕಟ್ಟುಗಳು ಇತ್ತೀಚೆಗೆ ಪತ್ತೆಯಾಗಿವೆ. ಇವುಗಳಿಂದ ದೇವಸ್ಥಾನದವರಿಗೂ ಉಪಯೋಗವಿಲ್ಲ, ದೇವರಿಗೆ ಸಮರ್ಪಿಸಿದ ಹಾಗೂ ಆಗುವುದಿಲ್ಲ. ಈ ಹಣವನ್ನು ಏನು ಮಾಡುವುದೆಂದು ತಿಳಿಯದೆ ದೇವಸ್ಥಾನದವರು ಚಡಪಡಿಸುವಂತಾಗಿದೆ. ಕಪ್ಪು ಹಣವನ್ನು ಇಟ್ಟುಕೊಂಡಿದ್ದಕ್ಕೆ ಪಾಪ ಪರಿಹಾರಾರ್ಥವಾಗಿ ದೇವರ ಹುಂಡಿಗೆ ಹಾಕಿ ಶಿಕ್ಷೆ ಅಥವಾ ದಂಡದಿಂದ ತಪ್ಪಿಸಿಕೊಳ್ಳುವ ತಂತ್ರ ಇದೆಂದು ಕಾಣುತ್ತದೆ.