ಈ ಬೆಳವಣಿಗೆಗೆ ಮುಖ್ಯವಾಗಿ ಮೂರು ಕಾರಣಗಳನ್ನು ಗುರುತಿಸಬಹುದು. ಮೊದಲನೆಯದು, ಪ್ರಜಾಪ್ರಭುತ್ವದಲ್ಲಿ ಒಂದು ವ್ಯವಸ್ಥೆಯಾಗಿ ವರ್ತಿಸಬೇಕಾದ ರಾಜಕೀಯ ಪಕ್ಷವೊಂದು ವ್ಯಕ್ತಿಕೇಂದ್ರಿತವಾದ ನಿರೂಪಣೆಗಳನ್ನು ಒಪ್ಪಿಕೊಂಡಿದ್ದು ಮತ್ತು ಧರ್ಮ, ರಾಷ್ಟ್ರೀಯತೆ, ಗೋವು, ಮಂದಿರ ಇತ್ಯಾದಿ ಚರ್ಚೆಗಳ ಭರದಲ್ಲಿ, ಜನರ ಅದ್ಯತೆಗಳಾದ ಉದ್ಯೋಗ, ಆಹಾರ, ಆರೋಗ್ಯದಂತಹ ಮಹತ್ವದ ವಿಷಯಗಳನ್ನು ಕಡೆಗಣಿಸಿದ್ದು.