ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಹಣ, ಮದ್ಯ, ಜಾತಿ ಲೆಕ್ಕಾಚಾರದಲ್ಲಿ ಮತಗಳನ್ನು ಸೆಳೆಯಲು ಯತ್ನಸುತ್ತಿವೆ. ಸಂವಿಧಾನ ನಮಗೆ ಮತದಾನದ ಹಕ್ಕು ನೀಡಿರುವುದು ದೇಶದ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಮತ ಚಲಾಯಿಸಲು. ದೇಶ ಅಭಿವೃದ್ಧಿ ಆದಾಗಲೇ ಎಲ್ಲರ ಜೀವನ ಸುಧಾರಿಸುತ್ತದೆ. ಹಣ, ಮದ್ಯ, ಜಾತಿ, ಧರ್ಮದ ಮೋಹಕ್ಕೆ ಸಿಲುಕಿ ಮತ ಚಲಾಯಿಸಿದರೆ ಮತವನ್ನು ಮಾರಿಕೊಂಡಂತೆ. ಮತದಾರರು ಯಾವುದೇ ಆಸೆಗೆ ಒಳಗಾಗದೆ ಮತ ಚಲಾಯಿಸಬೇಕಿದೆ.