ಕೆಲವು ಸುದ್ದಿವಾಹಿನಿಗಳು ಟಿಆರ್ಪಿಯ ಜಿದ್ದಾಜಿದ್ದಿಗೆ ಬಿದ್ದು ವಿವೇಚನಾರಹಿತವಾಗಿ ವರದಿ ಮಾಡುತ್ತಿರುವುದು ಆತಂಕಕಾರಿಯಾಗಿದೆ. ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಅವೆಲ್ಲವನ್ನೂ ಬಿಟ್ಟು ದಿನದ ಇಪ್ಪತ್ತನಾಲ್ಕು ಗಂಟೆಯೂ ಇಂತಹ ಕೆಲಸಕ್ಕೆ ಬಾರದ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇವುಗಳನ್ನು ನೋಡಿದ ಚಿಕ್ಕ ಮಕ್ಕಳು ಏನಾದರೂ ಆ ಬಗ್ಗೆ ಕೇಳಿದರೆ ನಾವು ಉತ್ತರಿಸಲಾರದ ಸ್ಥಿತಿಯಲ್ಲಿದ್ದೇವೆ. ಇಂತಹ ಸುದ್ದಿ–ದೃಶ್ಯಗಳನ್ನು ಪ್ರಸಾರ ಮಾಡಿ ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡಹುವುದು ಬೇಡ.