ಹೀಗಾಗಿಯೇ ಆ ‘ಕತೆಯನ್ನು ಮತ್ತೆ ಮತ್ತೆ ಹೇಳಬೇಕಾಗಿದೆ’ ಎಂದು ಅವರು ಹೇಳಿದ್ದಾರೆ. ಈ ಸ್ಥಿತಿಯ ಲಕ್ಷಣಗಳೆಂದರೆ- ರಾಜಕೀಯ ವಿರೋಧಿಗಳನ್ನು ದಮನಿಸುವುದು, ತಮ್ಮ ನಿಯಂತ್ರಣದಲ್ಲಿರುವ ಸಂಸತ್ತನ್ನು ಬಳಸಿಕೊಂಡು ನ್ಯಾಯಾಂಗ ಹಾಗೂ ಮಾಧ್ಯಮದ ಸ್ವಾತಂತ್ರ್ಯವನ್ನು ಹೊಸಕುವುದು, ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಬುಡಮೇಲು ಮಾಡುವುದು, ಪೊಲೀಸ್ ದೌರ್ಜನ್ಯಕ್ಕೆ ಕುಮ್ಮಕ್ಕು ನೀಡುವುದು, ಮುಖ್ಯ ನಿರ್ಧಾರಗಳು ಪ್ರಧಾನಿಯವರ ನಿವಾಸದಲ್ಲಿ ರೂಪುಗೊಳ್ಳುವುದು ಹಾಗೂ ಪ್ರಜಾತಂತ್ರವನ್ನು ನಾಶ ಮಾಡಿದ ಅರಿವಿದ್ದರೂ ಕ್ಷಮೆ ಕೇಳದಿರುವುದೇ ಆಗಿದೆ.