ಹೀಗಿರುವಾಗ ಆಯುಕ್ತರು, ಸಾರಿಗೆಗಾಗಿಯೇ ಶೇ 6ರಷ್ಟು ಭತ್ಯೆ ಪಡೆಯುತ್ತಿರುವ ಅಂಗವಿಕಲ ಸರ್ಕಾರಿ ನೌಕರರಿಗೆ ಉಚಿತ ಬಸ್ ಪಾಸ್ ಬೇಡಿಕೆ ಬಗ್ಗೆ ಒತ್ತಾಯ ಮಾಡಿರುವುದು ನಾಚಿಕೆಗೇಡಿನ ವಿಚಾರ. ವಿವಿಧ ಇಲಾಖೆಗಳಲ್ಲಿ ಅಂಗವಿಕಲ ನೌಕರರ ಮೇಲೆ ಆಗುತ್ತಿರುವ ದೌರ್ಜನ್ಯ, ಕಿರುಕುಳ; ಸೋಲಾರ್ ವಿದ್ಯುತ್ ಪಂಪ್ ಅಳವಡಿಕೆಯಲ್ಲಿ ಮೀಸಲಾತಿ ಮತ್ತು ರಿಯಾಯಿತಿ ನೀಡದಿರುವುದು, ಸ್ವಯಂ ಉದ್ಯೋಗದ ಸಾಲ ಸೌಲಭ್ಯದಿಂದ ವಂಚಿತರಾಗಿರುವುದು, ಮೀಸಲಾತಿ ಪ್ರಕಾರ ಉದ್ಯೋಗ ದೊರೆಯದಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲಸ್ನೇಹಿ ವಾತಾವರಣ ಇಲ್ಲದಿರುವುದು, ಮಾಸಾಶನವನ್ನು ಹೆಚ್ಚಿಸದಿರುವುದು, ಎನ್.ಜಿ.ಒ.ಗಳಿಂದ ಸೌಲಭ್ಯಗಳ ದುರುಪಯೋಗ, ಮಕ್ಕಳ ಮಾರಾಟ ದಂಧೆ… ಇಂಥ ಸಾಕಷ್ಟು ಸವಾಲುಗಳು ಅಂಗವಿಕಲರ ಮುಂದಿವೆ. ಇವುಗಳ ಮೇಲೆ ಬೆಳಕು ಚೆಲ್ಲಿ ನ್ಯಾಯ ಒದಗಿಸುವುದರ ಬದಲು, ಅಗತ್ಯವೇ ಇಲ್ಲದ ವಿಚಾರವನ್ನು ಚರ್ಚಿಸುತ್ತಿರುವ ನಮ್ಮ ಆಯುಕ್ತರ ಕಚೇರಿಯು ಇದ್ದೂ ಇಲ್ಲದಂತೆ.