ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್) ಮೂರು ದಿನ ನಡೆದರೆ, ಕೃಷಿ ಮೇಳ ನಾಲ್ಕು ದಿನ ಸಾಗಿತು. ಇವು ಮುಗಿದ ನಂತರ ಸಂಘಟಕರು ನೀಡಿದ ಹೇಳಿಕೆಗಳನ್ನು ನೋಡಿದಾಗ ತತ್ಕ್ಷಣಕ್ಕೆ ಆಶಾದಾಯಕ ಎನಿಸಿದರೂ, ಅನುಷ್ಠಾನವು ಕಾಲಬದ್ಧ ರೀತಿಯಲ್ಲಿ ನಡೆದೀತೆ ಎಂಬ ಅನುಮಾನ ಮೂಡುತ್ತದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು ‘ಮುಂದಿನ ದಿನಗಳಲ್ಲಿ ಕೃಷಿಕರ ಹೊಲಗಳಲ್ಲಿ ಸಂಶೋಧನೆ’ ಎಂದರೆ, ‘ಜಿಮ್ನಲ್ಲಿ ನಡೆದಿರುವ ಒಪ್ಪಂದಗಳ ಅನುಷ್ಠಾನ ಮೂರು ತಿಂಗಳಲ್ಲಿ ಆರಂಭ’ ಎಂದಿದ್ದಾರೆ ಮುಖ್ಯಮಂತ್ರಿ. ಉದ್ಯಮಗಳು ಬರಲು ಲ್ಯಾಂಡ್ ಬ್ಯಾಂಕ್ ಒಂದೇ ಸಾಲದು. ರಾಷ್ಟ್ರೀಯ ಹೆದ್ದಾರಿ ಸಂಪರ್ಕ, ವಿಮಾನ ನಿಲ್ದಾಣಗಳು ಪೂರಕ ಸೌಕರ್ಯಗಳು ಅಷ್ಟೆ. ಉತ್ಪಾದನೆ ಸತತವಾಗಿ ನಡೆಯಲು ಬೇರೆ ಸೌಲಭ್ಯಗಳು ದೊರೆಯುವಲ್ಲಿ ತಡ ಆಗಬಾರದು.