<p>ರಾಜ್ಯದ ಪಬ್ಲಿಕ್ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಈ ವರ್ಷದಿಂದಲೇ ಪ್ರಾರಂಭಿಸಲು ರಾಜ್ಯ ಸಚಿವ ಸಂಪುಟ ಸಮ್ಮತಿಸಿರುವುದು ಮಹತ್ವಪೂಣ೯ ನಿರ್ಧಾರ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಮೊದಲ ಹಂತದಲ್ಲಿಯೇ ಇಂತಹ ಕ್ರಮ ಕೈಗೊಂಡಿರುವುದು ಉಚಿತವಾದ ನಡೆ.</p>.<p>ಮಕ್ಕಳನ್ನು ಒಂದನೇ ತರಗತಿಗೆ ಪಬ್ಲಿಕ್ ಶಾಲೆಗಳಿಗೆ ಸೇರಿಸುವ ಮುನ್ನ ಎಲ್ಕೆಜಿ ಮತ್ತು ಯುಕೆಜಿಗಾಗಿ ಅವರನ್ನು ಖಾಸಗಿ ಶಾಲೆಗಳಲ್ಲೇ ಸೇರಿಸಬೇಕಾಗಿತ್ತು. ಇದೀಗ ಸಕಾ೯ರಿ ಶಾಲೆಗಳಲ್ಲಿಯೂ ಈ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಿರುವುದರಿಂದ ಪೋಷಕರ ಆರ್ಥಿಕ ಹೊರೆ ಇಳಿಸಿದಂತಾಗಿದೆ. ಇಲ್ಲದಿದ್ದರೆ ಅವರು ಖಾಸಗಿ ಶಾಲೆಗಳಲ್ಲಿ ಅದಕ್ಕಾಗಿ ದುಬಾರಿ ವೆಚ್ಚ ಭರಿಸಬೇಕಾಗಿತ್ತು.</p>.<p>ರಾಜ್ಯದ ಸಕಾ೯ರಿ ಪ್ರಥಮ ದಜೆ೯ ಕಾಲೇಜು, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಡಿಜಿಟಲ್ ಕಲಿಕೆಗೆ ₹ 35 ಕೋಟಿ ಮೊತ್ತದ ಯೋಜನೆ ರೂಪಿಸಿರುವುದು ಸಹ ಶ್ಲಾಘನೀಯ ಸಂಗತಿ. ಒಟ್ಟಾರೆ ರಾಜ್ಯ ಸಚಿವ ಸಂಪುಟವು ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿರುವುದು ಸ್ವಾಗತಾಹ೯ ಸಂಗತಿ.</p>.<p><strong>-ಎ.ಜಿ.ಸುರೇಂದ್ರಬಾಬು,ಹೊಳಲ್ಕೆರೆ, ಚಿತ್ರದುರ್ಗ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯದ ಪಬ್ಲಿಕ್ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಈ ವರ್ಷದಿಂದಲೇ ಪ್ರಾರಂಭಿಸಲು ರಾಜ್ಯ ಸಚಿವ ಸಂಪುಟ ಸಮ್ಮತಿಸಿರುವುದು ಮಹತ್ವಪೂಣ೯ ನಿರ್ಧಾರ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಮೊದಲ ಹಂತದಲ್ಲಿಯೇ ಇಂತಹ ಕ್ರಮ ಕೈಗೊಂಡಿರುವುದು ಉಚಿತವಾದ ನಡೆ.</p>.<p>ಮಕ್ಕಳನ್ನು ಒಂದನೇ ತರಗತಿಗೆ ಪಬ್ಲಿಕ್ ಶಾಲೆಗಳಿಗೆ ಸೇರಿಸುವ ಮುನ್ನ ಎಲ್ಕೆಜಿ ಮತ್ತು ಯುಕೆಜಿಗಾಗಿ ಅವರನ್ನು ಖಾಸಗಿ ಶಾಲೆಗಳಲ್ಲೇ ಸೇರಿಸಬೇಕಾಗಿತ್ತು. ಇದೀಗ ಸಕಾ೯ರಿ ಶಾಲೆಗಳಲ್ಲಿಯೂ ಈ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಿರುವುದರಿಂದ ಪೋಷಕರ ಆರ್ಥಿಕ ಹೊರೆ ಇಳಿಸಿದಂತಾಗಿದೆ. ಇಲ್ಲದಿದ್ದರೆ ಅವರು ಖಾಸಗಿ ಶಾಲೆಗಳಲ್ಲಿ ಅದಕ್ಕಾಗಿ ದುಬಾರಿ ವೆಚ್ಚ ಭರಿಸಬೇಕಾಗಿತ್ತು.</p>.<p>ರಾಜ್ಯದ ಸಕಾ೯ರಿ ಪ್ರಥಮ ದಜೆ೯ ಕಾಲೇಜು, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಡಿಜಿಟಲ್ ಕಲಿಕೆಗೆ ₹ 35 ಕೋಟಿ ಮೊತ್ತದ ಯೋಜನೆ ರೂಪಿಸಿರುವುದು ಸಹ ಶ್ಲಾಘನೀಯ ಸಂಗತಿ. ಒಟ್ಟಾರೆ ರಾಜ್ಯ ಸಚಿವ ಸಂಪುಟವು ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿರುವುದು ಸ್ವಾಗತಾಹ೯ ಸಂಗತಿ.</p>.<p><strong>-ಎ.ಜಿ.ಸುರೇಂದ್ರಬಾಬು,ಹೊಳಲ್ಕೆರೆ, ಚಿತ್ರದುರ್ಗ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>