ಸಮಾಜವಾದಿಗಳಾಗಿದ್ದ ಜಾರ್ಜ್ ಫರ್ನಾಂಡಿಸ್ ಹಾಗೂ ಭದ್ರಾವತಿ ಮಾಜಿ ಶಾಸಕ ಸಾಲೇರ ಸಿದ್ಧಪ್ಪ ಅವರು ಕೆಲವೇ ಗಂಟೆಗಳ ಅಂತರದಲ್ಲಿ ಮೃತರಾಗಿರುವುದು ಕಾಕತಾಳೀಯ. 1983ರಲ್ಲಿ ಸಿದ್ದಪ್ಪ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಫರ್ನಾಂಡಿಸ್ ಭದ್ರಾವತಿಯಲ್ಲಿ ಪ್ರಚಾರ ಭಾಷಣ ಮಾಡಿದ್ದರು.ಆಗ ಸಿದ್ಧಪ್ಪ ಗೆಲುವು ಸಾಧಿಸಿದ್ದರು. ಇದು ಶಿವಮೊಗ್ಗ ಜಿಲ್ಲೆಯ ಸಮಾಜವಾದಿ ಚಳವಳಿಗಾರರಿಗೆ ಒಂದು ಬುನಾದಿಯನ್ನು ಹಾಕಿಕೊಟ್ಟಿತ್ತು.