ಭಾರತದ ದೇಶಿ ಭಾಷೆಗಳಿಗೆ ಇಂಗ್ಲಿಷ್ ಭಾಷೆ ಕಂಟಕ ಆಗಿದ್ದು, ಸರ್ಕಾರಗಳು ಕೂಡ ಅದಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳುತ್ತಿರುವುದು ನಾಡ ಭಾಷೆಗಳ ಉಳಿವಿನ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಮುಂದಿನ ವರ್ಷಗಳಲ್ಲಿ ಈ ಕ್ರಮ ಇನ್ನೂ ವಿಸ್ತಾರಗೊಂಡು, ಕನ್ನಡ ಮತ್ತು ಉರ್ದು ಭಾಷೆಯ ಬೆಳವಣಿಗೆಗೆ ಇನ್ನಷ್ಟು ಅಡ್ಡಿಯಾಗುವುದನ್ನು ನಾವು ವಿಷಾದದಿಂದ ಗಮನಿಸಬೇಕಾಗಬಹುದು.