ಕೃಷಿ ಇಲಾಖೆ ಈ ಮೇಳಕ್ಕೆ ವಿವಿಧ ಜಿಲ್ಲೆ– ತಾಲ್ಲೂಕುಗಳಿಂದ ರೈತರನ್ನು ಕರೆತರಲು ಯತ್ನಿಸುವುದಕ್ಕಿಂತ ತಾನು ಕೈಗೊಂಡಿರುವ ಬೆಳೆ ಸಮೀಕ್ಷೆ ಇತ್ಯಾದಿ ಕೆಲಸ ಪೂರೈಸಿ, ಕನಿಷ್ಠ ಪಹಣಿಗಳಲ್ಲಿ ಬೆಳೆಗಳ ಹೆಸರು ಸೇರ್ಪಡೆಯಾಗುವಂತೆ ನೋಡಿಕೊಳ್ಳಬೇಕು. ಭಾಷಣ, ಸನ್ಮಾನ, ವಿಚಾರಗೋಷ್ಠಿ, ಪ್ರದರ್ಶನ ಇವುಗಳಿಗಿಂತ ಮೇಲಿನ ಎರಡು ಕೆಲಸಗಳು ಹೆಚ್ಚು ಪರಿಣಾಮಕಾರಿ.