<p>‘ಪ್ರಜಾವಾಣಿ’ಯ ಎರಡು ವಿಶೇಷ ವರದಿಗಳ (ಅ. 29) ಬಗೆಗೆ ಒಂದು ಪ್ರತಿಕ್ರಿಯೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಪ್ರತಿವರ್ಷ ಏರ್ಪಡಿಸುವ ಕೃಷಿ ಮೇಳ ಸಂದರ್ಭದಲ್ಲಿ ‘ಬರ ಆಗಾಗ ಸಂಭವಿಸುತ್ತಿರುತ್ತದೆ’ ಎಂಬ ವಿಷಯ ಪ್ರಸ್ತಾಪಕ್ಕೆ ಬರುತ್ತಿರುತ್ತದೆ.</p>.<p>ಬರಪೀಡಿತ ತಾಲ್ಲೂಕುಗಳಲ್ಲೊಂದರವನಾಗಿ ಹಾಗೂ ಆ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿ ನನಗನಿಸುವುದು- ಮೇಳ ನಡೆಸುವುದರ ಬದಲು ಕೃಷಿಯ ವಿವಿಧ ವಿಷಯಗಳ ಬಗೆಗಿನ ಅಧ್ಯಾಪಕರು ತಮ್ಮ ವ್ಯಾಪ್ತಿಯಲ್ಲಿನ ಜಿಲ್ಲೆಗಳ ಹಳ್ಳಿಗಳಿಗೆ ಹೋಗಿ ರೈತರು ಮಳೆ ಕೊರತೆ ಅಥವಾ ವೈಫಲ್ಯಕ್ಕೆ ಪ್ರತಿಯಾಗಿ ಯಾವ ಬೆಳೆ ಬೆಳೆದಿದ್ದಾರೆ, ಏನು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಪರಿಶೀಲಿಸಿ ಮುಂದಿನ ಮುಂಗಾರುವರೆಗಿನ ಅವಧಿಯ ಬಗೆಗೆ ಸಲಹೆ, ಮಾರ್ಗದರ್ಶನ ನೀಡುವುದು ಉಪಯುಕ್ತವಾದೀತು.</p>.<p>ಕೃಷಿ ಇಲಾಖೆ ಈ ಮೇಳಕ್ಕೆ ವಿವಿಧ ಜಿಲ್ಲೆ– ತಾಲ್ಲೂಕುಗಳಿಂದ ರೈತರನ್ನು ಕರೆತರಲು ಯತ್ನಿಸುವುದಕ್ಕಿಂತ ತಾನು ಕೈಗೊಂಡಿರುವ ಬೆಳೆ ಸಮೀಕ್ಷೆ ಇತ್ಯಾದಿ ಕೆಲಸ ಪೂರೈಸಿ, ಕನಿಷ್ಠ ಪಹಣಿಗಳಲ್ಲಿ ಬೆಳೆಗಳ ಹೆಸರು ಸೇರ್ಪಡೆಯಾಗುವಂತೆ ನೋಡಿಕೊಳ್ಳಬೇಕು. ಭಾಷಣ, ಸನ್ಮಾನ, ವಿಚಾರಗೋಷ್ಠಿ, ಪ್ರದರ್ಶನ ಇವುಗಳಿಗಿಂತ ಮೇಲಿನ ಎರಡು ಕೆಲಸಗಳು ಹೆಚ್ಚು ಪರಿಣಾಮಕಾರಿ.</p>.<p><strong>ಎಚ್.ಎಸ್. ಮಂಜುನಾಥ, ಗೌರಿಬಿದನೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಪ್ರಜಾವಾಣಿ’ಯ ಎರಡು ವಿಶೇಷ ವರದಿಗಳ (ಅ. 29) ಬಗೆಗೆ ಒಂದು ಪ್ರತಿಕ್ರಿಯೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಪ್ರತಿವರ್ಷ ಏರ್ಪಡಿಸುವ ಕೃಷಿ ಮೇಳ ಸಂದರ್ಭದಲ್ಲಿ ‘ಬರ ಆಗಾಗ ಸಂಭವಿಸುತ್ತಿರುತ್ತದೆ’ ಎಂಬ ವಿಷಯ ಪ್ರಸ್ತಾಪಕ್ಕೆ ಬರುತ್ತಿರುತ್ತದೆ.</p>.<p>ಬರಪೀಡಿತ ತಾಲ್ಲೂಕುಗಳಲ್ಲೊಂದರವನಾಗಿ ಹಾಗೂ ಆ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿ ನನಗನಿಸುವುದು- ಮೇಳ ನಡೆಸುವುದರ ಬದಲು ಕೃಷಿಯ ವಿವಿಧ ವಿಷಯಗಳ ಬಗೆಗಿನ ಅಧ್ಯಾಪಕರು ತಮ್ಮ ವ್ಯಾಪ್ತಿಯಲ್ಲಿನ ಜಿಲ್ಲೆಗಳ ಹಳ್ಳಿಗಳಿಗೆ ಹೋಗಿ ರೈತರು ಮಳೆ ಕೊರತೆ ಅಥವಾ ವೈಫಲ್ಯಕ್ಕೆ ಪ್ರತಿಯಾಗಿ ಯಾವ ಬೆಳೆ ಬೆಳೆದಿದ್ದಾರೆ, ಏನು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಪರಿಶೀಲಿಸಿ ಮುಂದಿನ ಮುಂಗಾರುವರೆಗಿನ ಅವಧಿಯ ಬಗೆಗೆ ಸಲಹೆ, ಮಾರ್ಗದರ್ಶನ ನೀಡುವುದು ಉಪಯುಕ್ತವಾದೀತು.</p>.<p>ಕೃಷಿ ಇಲಾಖೆ ಈ ಮೇಳಕ್ಕೆ ವಿವಿಧ ಜಿಲ್ಲೆ– ತಾಲ್ಲೂಕುಗಳಿಂದ ರೈತರನ್ನು ಕರೆತರಲು ಯತ್ನಿಸುವುದಕ್ಕಿಂತ ತಾನು ಕೈಗೊಂಡಿರುವ ಬೆಳೆ ಸಮೀಕ್ಷೆ ಇತ್ಯಾದಿ ಕೆಲಸ ಪೂರೈಸಿ, ಕನಿಷ್ಠ ಪಹಣಿಗಳಲ್ಲಿ ಬೆಳೆಗಳ ಹೆಸರು ಸೇರ್ಪಡೆಯಾಗುವಂತೆ ನೋಡಿಕೊಳ್ಳಬೇಕು. ಭಾಷಣ, ಸನ್ಮಾನ, ವಿಚಾರಗೋಷ್ಠಿ, ಪ್ರದರ್ಶನ ಇವುಗಳಿಗಿಂತ ಮೇಲಿನ ಎರಡು ಕೆಲಸಗಳು ಹೆಚ್ಚು ಪರಿಣಾಮಕಾರಿ.</p>.<p><strong>ಎಚ್.ಎಸ್. ಮಂಜುನಾಥ, ಗೌರಿಬಿದನೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>