ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟು ವರ್ಷ ಇಲ್ಲದ್ದು, ಈಗೇಕೆ?

Last Updated 27 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಹಿಂದಿ ಹೇರಿಕೆಗೆ ವ್ಯಕ್ತವಾಗುತ್ತಿರುವ ವಿರೋಧವನ್ನು ‘ಅವಾಸ್ತವಿಕ ಭಾಷಾವೇಶ’ ಎಂದು ಡಿ.ಎ.ಶಂಕರ್ ಅವರು ಕರೆದಿರುವುದು (ಸಂಗತ, ಸೆ. 26) ಅಸಮಂಜಸವಾಗಿದೆ. ಅವರಿಗೆ ಉತ್ತರ ಭಾರತದಲ್ಲಿ ಆದ ಭಾಷೆಯ ತೊಡಕಿನ ಅನುಭವ ನನಗೆ ದಕ್ಷಿಣ ಭಾರತದಲ್ಲಿ ಆಗಿದೆ. ಕೇರಳ- ತಮಿಳುನಾಡು ಪ್ರವಾಸಕ್ಕೆ ಹೋದಾಗಲೆಲ್ಲಾ ಸಂವಹನದ ತೊಂದರೆ ಅನುಭವಿಸಿದ್ದೇನೆ.

ಹಿಂದಿ ಹೇರಿಕೆಯ ವಿರುದ್ಧ ನಮ್ಮ ಆಕ್ರೋಶ ಸಕಾರಣವಾದದ್ದು. ರಾಷ್ಟ್ರಭಾಷೆಯಾಗಿ ಇಷ್ಟು ವರ್ಷ ಇರದ ಹಿಂದಿಯ ಅವಶ್ಯಕತೆ ಈಗ ಎಲ್ಲಿಂದ ಉದ್ಭವವಾಯಿತು? ಭಾರತೀಯರೆಲ್ಲಾ ತಮಗೆ ಅತ್ಯವಶ್ಯಕ ಎನಿಸಿದಾಗ ಮಾತೃಭಾಷೆಯನ್ನು ಹೊರತುಪಡಿಸಿ ಇತರ ಭಾರತೀಯ ಭಾಷೆಗಳನ್ನು (ಹಿಂದಿ ಸಮೇತ) ಕಲಿತು ವ್ಯವಹರಿಸುತ್ತಿದ್ದಾರೆ. ಕರ್ನಾಟಕದಲ್ಲಿರುವ ಪಂಜಾಬಿ, ಮಾರ್ವಾಡಿ ಜನ, ವ್ಯಾಪಾರ- ವ್ಯವಹಾರದಲ್ಲಿ ಕನ್ನಡ ಬಳಸುವ ಉದಾಹರಣೆ ನಮ್ಮ ಮುಂದಿದೆ.

ಹಿಂದಿಯನ್ನು ಎಲ್ಲರೂ ಕಲಿಯಬೇಕು ಎನ್ನುವುದು ಭಾಷಾ ಹೇರಿಕೆಯೇ ಸರಿ. ತ್ರಿಭಾಷಾ ಸೂತ್ರದಡಿ ಹಿಂದಿಯೇತರರು ಹಿಂದಿ ಕಲಿಯುವಂತೆ, ಹಿಂದಿ ಭಾಷಿಕರು ಯಾವ ಭಾಷೆ ಕಲಿಯುತ್ತಾರೆ? ಹಿಂದಿ ಭಾಷೆ ಕಲಿಯಬೇಕೆನ್ನುವ ಫರ್ಮಾನಿನ ಹಿಂದಿರುವ ದುರುದ್ದೇಶ ಅರಿಯಲಾರದಷ್ಟು ಮುಗ್ಧರಲ್ಲ ಕನ್ನಡಿಗರು.

-ಮಧು,ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT