ಆಡಳಿತಾತ್ಮಕವಾಗಿಯೂ ಪ್ರದೇಶವನ್ನು ‘ಕರ್ನಾಟಕ’ ಎಂಬ ಪದ ಬಿಂಬಿಸುವುದರಿಂದ ‘ಕರ್ನಾಟಕ ರಾಜ್ಯೋತ್ಸವ’ವೇ ಭಾರತದಂತಹ ಒಕ್ಕೂಟ ವ್ಯವಸ್ಥೆಯ ದೇಶಕ್ಕೆ ಸರಿಹೊಂದುತ್ತದೆ. ಆದರೆ ಬ್ಯಾರಿ, ಕೊಂಕಣಿ, ತುಳು, ಕೊಡವದಂತಹ ಭಾಷೆಗಳನ್ನಾಡುವ ಜನರೂ ಇಲ್ಲಿ ಇರುವುದರಿಂದ ‘ಕರ್ನಾಟಕ ರಾಜ್ಯೋತ್ಸವ’ ಎಂದಾಗಬೇಕು ಎನ್ನುವುದು ಸರಿಯಲ್ಲ. ಇದು ಈ ಭಾಷೆಗಳನ್ನಾಡುವ ಜನರ ರಾಜ್ಯವೂ ಹೌದಲ್ಲವೇ? ಅವರೆಲ್ಲ ನಮ್ಮ ರಾಜ್ಯದ ಸಹೋದರರು. ಆದರೂ ಅವರು ಅಲ್ಪಸಂಖ್ಯೆಯಲ್ಲಿ ಇರುವುದರಿಂದ, ಅವರ ಬಗ್ಗೆ, ಆ ಭಾಷೆಗಳ ಬಗ್ಗೆ ಅಭಿಮಾನ, ಗೌರವ ನಮ್ಮೆಲ್ಲರಿಗೂ ಇದ್ದರೂ ‘ಕರ್ನಾಟಕ ರಾಜ್ಯೋತ್ಸವ’ಕ್ಕೆ ಅದು ಸರಿಯಾದ ಕಾರಣ ಅಲ್ಲ ಮತ್ತು ಕನ್ನಡದೊಂದಿಗೆ ಹೋಲಿಕೆಯೂ ಸಲ್ಲದು. ಇದು ಭಾಷೆಯ ಹುಟ್ಟಿನ ಆಚರಣೆಯಲ್ಲ ಅಲ್ಲವೇ?