ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪಾಲಿಸಿ ಆಯ್ಕೆಯಲ್ಲಿ ಜನ ಪ್ರಬುದ್ಧರು

Last Updated 23 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

* ಈ ಇನ್ಶೂರೆನ್ಸ್ ಖರೀದಿಸಬೇಕೇ?’ ಎಂಬ ಅವಿನಾಶ್‌ ಕೆ.ಟಿ. ಅವರ ಲೇಖನ (ಪ್ರ.ವಾ., ಸೆ. 21) ಪೂರ್ವಗ್ರಹದಿಂದ ಪೀಡಿತವಾಗಿದೆ. ಜೀವ ವಿಮಾ ನಿಗಮದಲ್ಲಿ ಯಾವುದೇ ಪಾಲಿಸಿಗೂ ಶೇ 42ರಷ್ಟು ಕಮಿಷನ್ ನೀಡುವುದು ಸತ್ಯಕ್ಕೆ ದೂರವಾದ ಸಂಗತಿ. ಕೆಲವು ಪಾಲಿಸಿಗಳಲ್ಲಿ ಏಜೆಂಟರಿಗೆ ಸಿಗುವ ಕಮಿಷನ್ ಅವರು ಓಡಾಡುವ ಪೆಟ್ರೋಲ್ ಖರ್ಚಿಗೂ ಸಾಕಾಗುವುದಿಲ್ಲ. ಜೀವವಿಮಾ ಪ್ರತಿನಿಧಿಗಳು ತಮ್ಮ ವೃತ್ತಿಯನ್ನು ಒಂದು ಸಮಾಜಸೇವೆ ಎಂದು ಭಾವಿಸಿ, ದೇಶದ ಆರ್ಥಿಕ ಪರಿಸ್ಥಿತಿಗೆ ತಮ್ಮದೇ ಕೊಡುಗೆ ನೀಡುತ್ತಾ ಬಂದಿದ್ದಾರೆ.

ಪಟ್ಟಭದ್ರ ಹಿತಾಸಕ್ತಿಗಳು ಕೆಲವು ದಶಕಗಳಿಂದಲೂ ಇಂತಹ ಅಪಪ್ರಚಾರವನ್ನು ಮಾಡುತ್ತಲೇ ಬಂದಿವೆ. ಈಗಿನ ಕಾಲಘಟ್ಟದಲ್ಲಿ ದೃಶ್ಯಮಾಧ್ಯಮ, ಸಮೂಹ ಮಾಧ್ಯಮಗಳ ಮುಖಾಂತರ ಅಗಾಧ ಅರಿವು ಹೊಂದಿರುವ ಪಾಲಿಸಿದಾರರು, ಯಾವ ಪಾಲಿಸಿಯನ್ನು ತೆಗೆದುಕೊಳ್ಳಬೇಕು ಅಥವಾ ಬಿಡಬೇಕು ಎಂಬುದನ್ನು ನಿರ್ಧರಿಸುವಷ್ಟು ಶಕ್ತರಾಗಿರುತ್ತಾರೆ.

ಬೂಕನಕೆರೆ ವಿಜೇಂದ್ರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT