ಒಬ್ಬನೇ ಒಬ್ಬ ಕನ್ನಡಿಗ ಆಟಗಾರ ಇಲ್ಲದಿದ್ದರೂ ಕೇವಲ ಬೆಂಗಳೂರು ಎಂಬ ಹೆಸರಿರುವ ಆರ್ಸಿಬಿ ತಂಡ ಗೆದ್ದುದಕ್ಕೆ ಸಂಭ್ರಮಿಸಬೇಕೋ ಅಥವಾ ಕನ್ನಡಿಗ ರಾಹುಲ್ ನಾಯಕತ್ವದ ತಂಡ ಎಲ್ಎಸ್ಜಿ ಸೋತಿದ್ದಕ್ಕೆ ಬೇಸರಗೊಳ್ಳಬೇಕೋ ಎಂಬುದು. ಮನಸ್ಸಿಗೆ ಹಿಂಸೆ ನೀಡುವ ವಿಚಾರ ಇದು. ಆರ್ಸಿಬಿ ನಮ್ಮ ತಂಡ ಎಂಬುದನ್ನು ಒಪ್ಪಲು ಮನಸ್ಸು ಒಪ್ಪದು. ಹಾಗಾಗಿ, ಮುಂದಿನ ವರ್ಷಗಳಲ್ಲಿ ಆಯಾ ರಾಜ್ಯದ ಕನಿಷ್ಠ ನಾಲ್ವರು ಆಟಗಾರರು ತಂಡದಲ್ಲಿರಬೇಕು ಎಂಬ ನಿಯಮ ತರಲಿ. ಇಲ್ಲವಾದಲ್ಲಿ ತಂಡದ ಹೆಸರಲ್ಲಿ ಮಾತ್ರ ಬೆಂಗಳೂರು ಎಂದು ಇದ್ದರೆ ಅದು ಅನರ್ಥವಷ್ಟೆ.
–ಪತ್ತಂಗಿ ಎಸ್. ಮುರಳಿ,ಬೆಂಗಳೂರು