ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಕಟ್ಟಡದ ಮೂರನೇ ಮಹಡಿಯಲ್ಲಿನ ‘ಕುವೆಂಪು ಸಭಾಂಗಣ’ದಲ್ಲಿ ಇತ್ತೀಚೆಗೆ ನಡೆದ ಸನ್ಮಾನ ಸಮಾರಂಭಕ್ಕೆ ಹೋಗುವ ಸಂದರ್ಭ ಒದಗಿತ್ತು. ಆ ಸಭಾಂಗಣ, ಪ್ರೇಕ್ಷಕರಿಗಾಗಿ ಹಾಕಿದ್ದ ಕುರ್ಚಿಗಳು, ಸುತ್ತಲಿನ ಗೋಡೆ, ವೇದಿಕೆಗೆ ಹಾಕಿದ್ದ ನೆಲಹಾಸು, ಪೀಠೋಪಕರಣ, ಅದನ್ನು ಮುಚ್ಚಲು ಬಳಸಿದ್ದ ಬಟ್ಟೆ, ಉಪನ್ಯಾಸ ವೇದಿಕೆಯ ಹಿಂದೆ ಇಳಿಬಿಟ್ಟಿದ್ದ ಪರದೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಾಗ,ಕನ್ನಡಕ್ಕಿರುವ ಬಡತನವನ್ನು ಆ ಸಭಾಂಗಣ ನಮ್ಮ ಮುಂದೆ ತಂದು ನಿಲ್ಲಿಸಿದಂತಿತ್ತು. ಇಂಥ ಸಭಾಂಗಣಕ್ಕೂಕುವೆಂಪು ಅವರಂಥ ಶುಭ್ರ, ತೇಜಸ್ವಿ ವ್ಯಕ್ತಿತ್ವಕ್ಕೂ ಎಲ್ಲಿಂದೆಲ್ಲಿಯ ಹೋಲಿಕೆ?