<p>ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಕಟ್ಟಡದ ಮೂರನೇ ಮಹಡಿಯಲ್ಲಿನ ‘ಕುವೆಂಪು ಸಭಾಂಗಣ’ದಲ್ಲಿ ಇತ್ತೀಚೆಗೆ ನಡೆದ ಸನ್ಮಾನ ಸಮಾರಂಭಕ್ಕೆ ಹೋಗುವ ಸಂದರ್ಭ ಒದಗಿತ್ತು. ಆ ಸಭಾಂಗಣ, ಪ್ರೇಕ್ಷಕರಿಗಾಗಿ ಹಾಕಿದ್ದ ಕುರ್ಚಿಗಳು, ಸುತ್ತಲಿನ ಗೋಡೆ, ವೇದಿಕೆಗೆ ಹಾಕಿದ್ದ ನೆಲಹಾಸು, ಪೀಠೋಪಕರಣ, ಅದನ್ನು ಮುಚ್ಚಲು ಬಳಸಿದ್ದ ಬಟ್ಟೆ, ಉಪನ್ಯಾಸ ವೇದಿಕೆಯ ಹಿಂದೆ ಇಳಿಬಿಟ್ಟಿದ್ದ ಪರದೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಾಗ,ಕನ್ನಡಕ್ಕಿರುವ ಬಡತನವನ್ನು ಆ ಸಭಾಂಗಣ ನಮ್ಮ ಮುಂದೆ ತಂದು ನಿಲ್ಲಿಸಿದಂತಿತ್ತು. ಇಂಥ ಸಭಾಂಗಣಕ್ಕೂಕುವೆಂಪು ಅವರಂಥ ಶುಭ್ರ, ತೇಜಸ್ವಿ ವ್ಯಕ್ತಿತ್ವಕ್ಕೂ ಎಲ್ಲಿಂದೆಲ್ಲಿಯ ಹೋಲಿಕೆ?</p>.<p>ಇಟ್ಟ ಹೆಸರಿಗೆ ತಕ್ಕಂತೆ ಸಭಾಂಗಣವನ್ನು ಸರಳವಾಗಿ, ಅಚ್ಚುಕಟ್ಟಾಗಿ, ಕಣ್ಮನಕ್ಕೆ ಹಿತವಾಗುವ ಹಾಗೆ ಸಜ್ಜುಗೊಳಿಸಲು ಸಾಧ್ಯವಿಲ್ಲದಂಥ ಬರ ಬಂದಿದೆಯೇ? ಹಣದ ಕೊರತೆಯೇ? ಕೆಲವೇ ನಿಮಿಷಗಳ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಮ್ಮ ಸರ್ಕಾರ ಲಕ್ಷಾಂತರ ರೂಪಾಯಿ ವ್ಯಯಿಸುತ್ತದೆ.</p>.<p>ಹೊಸದಾಗಿ ನೇಮಕಗೊಂಡ ಮಂತ್ರಿಗಳ ಅಭಿಲಾಷೆ ಪೂರೈಸಲು ಅವರಿಗೆ ಮೀಸಲಾದ ಕೊಠಡಿಯನ್ನು ಹತ್ತಾರು ಲಕ್ಷ ರೂಪಾಯಿ ವೆಚ್ಚದಲ್ಲಿ ಸಜ್ಜುಗೊಳಿಸಲು ಹಣಕ್ಕೆ ಬರ ಇಲ್ಲ. ಕನ್ನಡ ಮತ್ತು ಅದಕ್ಕೆ ಸಂಬಂಧಿಸಿದ ವಿಷಯದಲ್ಲಿ ಹಣಕ್ಕೆ ತತ್ವಾರ! ಇದು ಎಂಥ<br />ಶೋಚನೀಯ ಸ್ಥಿತಿ?</p>.<p><strong>ಸಾಮಗ ದತ್ತಾತ್ರಿ,ಬೆಂಗಳೂರು</strong></p>.<p><strong>***</strong></p>.<p><strong>ವರ್ಷ ಸಂಜೀವಿನಿ...</strong></p>.<p>ಬಂಡೀಪುರದಲ್ಲಿ ವರ್ಷಧಾರೆಯಂತೆ. ಬಹುಶಃ ಮಾನವನ ರಾಕ್ಷಸಿ ಪ್ರವೃತ್ತಿಯಿಂದ (ಕಾಳ್ಗಿಚ್ಚು ಕಾರಣ) ಬೇಸತ್ತು, ಪ್ರಕೃತಿ ಮಾತೆಯೇ ಮಳೆ ಕರುಣಿಸಿರಬೇಕು. ಸುಟ್ಟ ಗಿಡ–ಮರಗಳಿಗೆ ಈ ಮಳೆ ಸಂಜೀವಿನಿಯಾಗಲಿ, ಅವುಗಳು ಶೀಘ್ರ ಚಿಗುರೊಡೆಯಲಿ. ‘ಬೆಂಕಿಪುರ’ವಾಗಿದ್ದ ಬಂಡೀಪುರ ಹಸಿರಿನಿಂದ ಮತ್ತೆ ಕಂಗೊಳಿಸಲಿ. ಸಕಲ ಜೀವರಾಶಿಗೆ ಆಶ್ರಯವಾಗಲಿ.</p>.<p><strong>ನಗರ ಗುರುದೇವ್ ಭಂಡಾರ್ಕರ್,ಹೊಸನಗರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಕಟ್ಟಡದ ಮೂರನೇ ಮಹಡಿಯಲ್ಲಿನ ‘ಕುವೆಂಪು ಸಭಾಂಗಣ’ದಲ್ಲಿ ಇತ್ತೀಚೆಗೆ ನಡೆದ ಸನ್ಮಾನ ಸಮಾರಂಭಕ್ಕೆ ಹೋಗುವ ಸಂದರ್ಭ ಒದಗಿತ್ತು. ಆ ಸಭಾಂಗಣ, ಪ್ರೇಕ್ಷಕರಿಗಾಗಿ ಹಾಕಿದ್ದ ಕುರ್ಚಿಗಳು, ಸುತ್ತಲಿನ ಗೋಡೆ, ವೇದಿಕೆಗೆ ಹಾಕಿದ್ದ ನೆಲಹಾಸು, ಪೀಠೋಪಕರಣ, ಅದನ್ನು ಮುಚ್ಚಲು ಬಳಸಿದ್ದ ಬಟ್ಟೆ, ಉಪನ್ಯಾಸ ವೇದಿಕೆಯ ಹಿಂದೆ ಇಳಿಬಿಟ್ಟಿದ್ದ ಪರದೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಾಗ,ಕನ್ನಡಕ್ಕಿರುವ ಬಡತನವನ್ನು ಆ ಸಭಾಂಗಣ ನಮ್ಮ ಮುಂದೆ ತಂದು ನಿಲ್ಲಿಸಿದಂತಿತ್ತು. ಇಂಥ ಸಭಾಂಗಣಕ್ಕೂಕುವೆಂಪು ಅವರಂಥ ಶುಭ್ರ, ತೇಜಸ್ವಿ ವ್ಯಕ್ತಿತ್ವಕ್ಕೂ ಎಲ್ಲಿಂದೆಲ್ಲಿಯ ಹೋಲಿಕೆ?</p>.<p>ಇಟ್ಟ ಹೆಸರಿಗೆ ತಕ್ಕಂತೆ ಸಭಾಂಗಣವನ್ನು ಸರಳವಾಗಿ, ಅಚ್ಚುಕಟ್ಟಾಗಿ, ಕಣ್ಮನಕ್ಕೆ ಹಿತವಾಗುವ ಹಾಗೆ ಸಜ್ಜುಗೊಳಿಸಲು ಸಾಧ್ಯವಿಲ್ಲದಂಥ ಬರ ಬಂದಿದೆಯೇ? ಹಣದ ಕೊರತೆಯೇ? ಕೆಲವೇ ನಿಮಿಷಗಳ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಮ್ಮ ಸರ್ಕಾರ ಲಕ್ಷಾಂತರ ರೂಪಾಯಿ ವ್ಯಯಿಸುತ್ತದೆ.</p>.<p>ಹೊಸದಾಗಿ ನೇಮಕಗೊಂಡ ಮಂತ್ರಿಗಳ ಅಭಿಲಾಷೆ ಪೂರೈಸಲು ಅವರಿಗೆ ಮೀಸಲಾದ ಕೊಠಡಿಯನ್ನು ಹತ್ತಾರು ಲಕ್ಷ ರೂಪಾಯಿ ವೆಚ್ಚದಲ್ಲಿ ಸಜ್ಜುಗೊಳಿಸಲು ಹಣಕ್ಕೆ ಬರ ಇಲ್ಲ. ಕನ್ನಡ ಮತ್ತು ಅದಕ್ಕೆ ಸಂಬಂಧಿಸಿದ ವಿಷಯದಲ್ಲಿ ಹಣಕ್ಕೆ ತತ್ವಾರ! ಇದು ಎಂಥ<br />ಶೋಚನೀಯ ಸ್ಥಿತಿ?</p>.<p><strong>ಸಾಮಗ ದತ್ತಾತ್ರಿ,ಬೆಂಗಳೂರು</strong></p>.<p><strong>***</strong></p>.<p><strong>ವರ್ಷ ಸಂಜೀವಿನಿ...</strong></p>.<p>ಬಂಡೀಪುರದಲ್ಲಿ ವರ್ಷಧಾರೆಯಂತೆ. ಬಹುಶಃ ಮಾನವನ ರಾಕ್ಷಸಿ ಪ್ರವೃತ್ತಿಯಿಂದ (ಕಾಳ್ಗಿಚ್ಚು ಕಾರಣ) ಬೇಸತ್ತು, ಪ್ರಕೃತಿ ಮಾತೆಯೇ ಮಳೆ ಕರುಣಿಸಿರಬೇಕು. ಸುಟ್ಟ ಗಿಡ–ಮರಗಳಿಗೆ ಈ ಮಳೆ ಸಂಜೀವಿನಿಯಾಗಲಿ, ಅವುಗಳು ಶೀಘ್ರ ಚಿಗುರೊಡೆಯಲಿ. ‘ಬೆಂಕಿಪುರ’ವಾಗಿದ್ದ ಬಂಡೀಪುರ ಹಸಿರಿನಿಂದ ಮತ್ತೆ ಕಂಗೊಳಿಸಲಿ. ಸಕಲ ಜೀವರಾಶಿಗೆ ಆಶ್ರಯವಾಗಲಿ.</p>.<p><strong>ನಗರ ಗುರುದೇವ್ ಭಂಡಾರ್ಕರ್,ಹೊಸನಗರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>