‘ಸ್ವಾ’ ಎಂದರೆ ತೊರೆ, ಬಿಟ್ಟುಬಿಡು. ‘ಮಿ’ ಎಂದರೆ ಮೋಹ, ಮಮಕಾರ ವರ್ಜಿಸಿ ತಾನು, ತನ್ನದು ಎಂಬುದನ್ನು ತೊರೆದು, ತನ್ನನ್ನು ತಾನು ಸಮಾಜಕ್ಕೆ ಅರ್ಪಿಸಿಕೊಳ್ಳುವುದು ಎಂದರ್ಥ. ಲೌಕಿಕದ ತಂದೆ-ತಾಯಿ, ಬಂಧು-ಬಳಗ ಎಲ್ಲರನ್ನೂ ಬಿಟ್ಟು, ಇಡೀ ಸಮಾಜವೇ ತನ್ನ ತಂದೆ-ತಾಯಿ, ಬಂಧು-ಬಳಗ ಎಂದು ಬಗೆದು ಸಮಾಜಸೇವೆ ಮಾಡಬೇಕಾದುದು ಇವರ ಕರ್ತವ್ಯ. ಇಂತಹ ಘನವಾದ ಸ್ಥಾನ ಹೊಂದಿರುವ ಸ್ವಾಮಿಗಳು ಇದೀಗ ಇಡೀ ಸಮಾಜದ ಉದ್ಧಾರಕ್ಕಾಗಿಯೇ ರಾಜಕೀಯ ಪ್ರವೇಶ ಪಡೆಯುತ್ತಿರಬಹುದೇ? ಅಥವಾ ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಳ್ಳಲು ಇರಬಹುದೇ? ಯಾರು ಬಲ್ಲರು?! ಆದರೆ ಸನ್ಯಾಸ ಜೀವನ ನಡೆಸುವ ಇವರು, ಚುನಾವಣೆಯಲ್ಲಿ ಗೆದ್ದು, ಲೌಕಿಕ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವೇ?