ಕೊರೊನಾದ ಇಂಥ ಸಂಕಷ್ಟ ಪರಿಸ್ಥಿತಿಯಲ್ಲಾದರೂ ರಾಜ್ಯಸಭೆಗೆ, ವಿಧಾನ ಪರಿಷತ್ತಿಗೆ ತಜ್ಞ ವೈದ್ಯರನ್ನು, ತಂತ್ರಜ್ಞರನ್ನು, ಶಿಕ್ಷಣ ತಜ್ಞರನ್ನು, ವಾಸ್ತುಶಿಲ್ಪಿಗಳನ್ನು, ಅರ್ಥಶಾಸ್ತ್ರಜ್ಞರನ್ನು, ಕೃಷಿ ವಿಜ್ಞಾನಿಗಳನ್ನು ಆರಿಸಿ ಕಳಿಸುವಂತಹ ವಿವೇಕವನ್ನು ರಾಜಕೀಯ ಪಕ್ಷಗಳು ತೋರಬಹುದು ಎಂದು ಭಾವಿಸಿದವರಿಗೆ ನಿರಾಸೆ ಆಗುವ ರೀತಿಯಲ್ಲಿ ಬೆಳವಣಿಗೆಗಳು ನಡೆದಿವೆ. ಅದೇ ರಾಜಕಾರಣಿಗಳು, ಅದೇ ವಂಶ ರಾಜಕಾರಣ, ಅದೇ ಗುಂಪುಗಾರಿಕೆ, ಜಾತಿ– ಉಪಜಾತಿಗಳ ಮೇಲಾಟ!