<p>ಚನ್ನಮ್ಮನ ಕಿತ್ತೂರಿಗೆ ಇತ್ತೀಚೆಗೆ ಭೇಟಿ ಕೊಟ್ಟಿದ್ದೆ. ಕೋಟೆಗೆ ಹೋಗುವ ರಸ್ತೆಯ ಅಕ್ಕಪಕ್ಕದ ಬಹತೇಕ ಅಂಗಡಿಗಳ ಫಲಕಗಳಲ್ಲಿ ಊರಿನ ಹೆಸರನ್ನು ‘ಚ. ಕಿತ್ತೂರು’ ಎಂದು ಬರೆದಿರುವುದನ್ನು ಗಮನಿಸಿದೆ.</p>.<p>ರಾಣಿ ಚನ್ನಮ್ಮ ಅವರ ಕರ್ಮಭೂಮಿ ಕಿತ್ತೂರಿಗೆ ‘ಚನ್ನಮ್ಮನ ಕಿತ್ತೂರು’ ಎಂದು ರಾಜ್ಯ ಸರ್ಕಾರ ಮರುನಾಮಕರಣ ಮಾಡಿತ್ತು. ಅಷ್ಟೇ ಅಲ್ಲ ಕನಕದಾಸರು ಹುಟ್ಟಿದ ಹಾವೇರಿ ಜಿಲ್ಲೆ, ಶಿಗ್ಗಾವಿ ತಾಲ್ಲೂಕಿನ ‘ಬಾಡ’ ಗ್ರಾಮವನ್ನು ‘ಕನಕನ ಬಾಡ’ ಎಂದು ಮರುನಾಮಕರಣ ಮಾಡಿದೆ. ಈ ಮರುನಾಮಕರಣದ ಉದ್ದೇಶ ಆ ಭೂಮಿಯಲ್ಲಿ ಹುಟ್ಟಿದ ಮಹನೀಯರನ್ನು ನೆನಪಿಸಿಕೊಳ್ಳುವುದೇ ಆಗಿದೆ.</p>.<p>ತನ್ನ ಚಿಕ್ಕ ಸಂಸ್ಥಾನವನ್ನು ರಕ್ಷಿಸಲು ಚನ್ನಮ್ಮ ಅವರು ಪ್ರಾಣದ ಹಂಗು ತೊರೆದು ಬ್ರಿಟಿಷರ ವಿರುದ್ಧ ಹೋರಾಡಿದ್ದಳೆಂಬುದು ಎಲ್ಲರಲ್ಲೂ ಹೆಮ್ಮೆ ಮೂಡಿಸುವ ವಿಚಾರವಲ್ಲವೇ?</p>.<p>ಆದರೆ ಇಂದು ಕಿತ್ತೂರಿನ ಕೋಟೆ, ಚನ್ನಮ್ಮನ ಅರಮನೆಗಳನ್ನು ನೋಡಿದರೆ ನೋವಾಗುತ್ತದೆ. ರಾಣಿಯಾಗಿ ವೈಭೋಗದ ಸುಪ್ಪತ್ತಿಗೆಯಲ್ಲಿ ಕೂರದೆ, ಸಂಸ್ಥಾನ ರಕ್ಷಣೆಗಾಗಿ ಸ್ವಾಭಿಮಾನದಿಂದ ಹೋರಾಡಿದ ಧೀರ ಮಹಿಳೆ ರಾಣಿ ಚನ್ನಮ್ಮನ ಹೆಸರನ್ನು ಹೇಳಲು, ಬರೆಯಲು ಅಲ್ಲಿನ ಜನರು ಹೆಮ್ಮೆಪಡಬೇಕೇ ಹೊರತು, ಸಣ್ಣತನ ತೋರಬಾರದು.</p>.<p><strong>ಹಲವಾಗಲ ಶಂಭು,ರಾಣೆಬೆನ್ನೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚನ್ನಮ್ಮನ ಕಿತ್ತೂರಿಗೆ ಇತ್ತೀಚೆಗೆ ಭೇಟಿ ಕೊಟ್ಟಿದ್ದೆ. ಕೋಟೆಗೆ ಹೋಗುವ ರಸ್ತೆಯ ಅಕ್ಕಪಕ್ಕದ ಬಹತೇಕ ಅಂಗಡಿಗಳ ಫಲಕಗಳಲ್ಲಿ ಊರಿನ ಹೆಸರನ್ನು ‘ಚ. ಕಿತ್ತೂರು’ ಎಂದು ಬರೆದಿರುವುದನ್ನು ಗಮನಿಸಿದೆ.</p>.<p>ರಾಣಿ ಚನ್ನಮ್ಮ ಅವರ ಕರ್ಮಭೂಮಿ ಕಿತ್ತೂರಿಗೆ ‘ಚನ್ನಮ್ಮನ ಕಿತ್ತೂರು’ ಎಂದು ರಾಜ್ಯ ಸರ್ಕಾರ ಮರುನಾಮಕರಣ ಮಾಡಿತ್ತು. ಅಷ್ಟೇ ಅಲ್ಲ ಕನಕದಾಸರು ಹುಟ್ಟಿದ ಹಾವೇರಿ ಜಿಲ್ಲೆ, ಶಿಗ್ಗಾವಿ ತಾಲ್ಲೂಕಿನ ‘ಬಾಡ’ ಗ್ರಾಮವನ್ನು ‘ಕನಕನ ಬಾಡ’ ಎಂದು ಮರುನಾಮಕರಣ ಮಾಡಿದೆ. ಈ ಮರುನಾಮಕರಣದ ಉದ್ದೇಶ ಆ ಭೂಮಿಯಲ್ಲಿ ಹುಟ್ಟಿದ ಮಹನೀಯರನ್ನು ನೆನಪಿಸಿಕೊಳ್ಳುವುದೇ ಆಗಿದೆ.</p>.<p>ತನ್ನ ಚಿಕ್ಕ ಸಂಸ್ಥಾನವನ್ನು ರಕ್ಷಿಸಲು ಚನ್ನಮ್ಮ ಅವರು ಪ್ರಾಣದ ಹಂಗು ತೊರೆದು ಬ್ರಿಟಿಷರ ವಿರುದ್ಧ ಹೋರಾಡಿದ್ದಳೆಂಬುದು ಎಲ್ಲರಲ್ಲೂ ಹೆಮ್ಮೆ ಮೂಡಿಸುವ ವಿಚಾರವಲ್ಲವೇ?</p>.<p>ಆದರೆ ಇಂದು ಕಿತ್ತೂರಿನ ಕೋಟೆ, ಚನ್ನಮ್ಮನ ಅರಮನೆಗಳನ್ನು ನೋಡಿದರೆ ನೋವಾಗುತ್ತದೆ. ರಾಣಿಯಾಗಿ ವೈಭೋಗದ ಸುಪ್ಪತ್ತಿಗೆಯಲ್ಲಿ ಕೂರದೆ, ಸಂಸ್ಥಾನ ರಕ್ಷಣೆಗಾಗಿ ಸ್ವಾಭಿಮಾನದಿಂದ ಹೋರಾಡಿದ ಧೀರ ಮಹಿಳೆ ರಾಣಿ ಚನ್ನಮ್ಮನ ಹೆಸರನ್ನು ಹೇಳಲು, ಬರೆಯಲು ಅಲ್ಲಿನ ಜನರು ಹೆಮ್ಮೆಪಡಬೇಕೇ ಹೊರತು, ಸಣ್ಣತನ ತೋರಬಾರದು.</p>.<p><strong>ಹಲವಾಗಲ ಶಂಭು,ರಾಣೆಬೆನ್ನೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>