ಕುವೆಂಪು ಅವರ ಪುಸ್ತಕಗಳು ಎಲ್ಲರಿಗೂ ಸುಲಭವಾಗಿ ದೊರಕುವಂತೆ ಮಾಡುವುದು ತೀರಾ ಅಗತ್ಯವಾಗಿ ಮಾಡಬೇಕಾದ ಕೆಲಸ ಎಂದು ಕೆಲ ಲೇಖಕರು ಪತ್ರ ಬರೆದಿರುವುದಕ್ಕೆ (ವಾ.ವಾ., ಜುಲೈ 11) ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರು ಕುವೆಂಪು ಅವರ ಸಾಹಿತ್ಯದ ಹಕ್ಕುಸ್ವಾಮ್ಯ ಪ್ರತಿಷ್ಠಾನಕ್ಕಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ (ವಾ.ವಾ., ಜುಲೈ 14). ಕುವೆಂಪು ಅವರ ಸಾಹಿತ್ಯ ಎಲ್ಲರಿಗೂ ಸುಲಭವಾಗಿ ದೊರೆಯುವಂತೆ ಮಾಡುವ ದಾರಿ, ಅವರ ಬರಹಗಳನ್ನು ಹಕ್ಕುಸ್ವಾಮ್ಯದಿಂದ ಮುಕ್ತಗೊಳಿಸುವುದು.