ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಾಹಿತ್ಯದ ‘ಪೌಷ್ಟಿಕತೆ’

Last Updated 25 ಜೂನ್ 2018, 17:30 IST
ಅಕ್ಷರ ಗಾತ್ರ

‘ಕನ್ನಡದ ಕಸ್ತೂರಿಗೆ ಬೇಕಿದೆ ಹೊಸ ತುತ್ತೂರಿ’ (ಪ್ರ.ವಾ.,ಜೂನ್‌ 24) ಲೇಖನದಲ್ಲಿ ರಘುನಾಥ ಚ.ಹ. ಅವರು ‘ನೈತಿಕತೆಯ ಬೊಜ್ಜು ಮಕ್ಕಳ ಸಾಹಿತ್ಯದ ಅಪೌಷ್ಟಿಕತೆಗೆ ಕಾರಣ’ ಎಂದಿದ್ದಾರೆ.

ಇದು ನಿಜವೇ ಆಗಿದ್ದರೂ ಮಕ್ಕಳ ಸಾಹಿತ್ಯದ ಒಳಗೆ ನೈತಿಕತೆ ಸಹಜವಾಗಿಯೇ ಒಡಮೂಡಿ ಬಂದಿರುತ್ತದೆ ಎಂಬುವುದನ್ನೂ ಮರೆಯುವಂತಿಲ್ಲ. ಇದು ಮಕ್ಕಳ ಸಾಹಿತ್ಯದ ಒಂದು ಲಕ್ಷಣವೂ ಆಗಿದೆ. ಆದ್ದರಿಂದ ಮಕ್ಕಳ ಸಾಹಿತ್ಯದಲ್ಲಿ ನೈತಿಕತೆಯನ್ನು ಸಾರಾಸಗಟಾಗಿ ನಿರ್ಲಕ್ಷ್ಯ ಮಾಡುವಂತಿಲ್ಲ. ಆದರೆ ನೀತಿ ಹೇಳಬೇಕೆಂದೇ ರಚನೆಗೊಳ್ಳುವ ಮಕ್ಕಳ ಸಾಹಿತ್ಯದಲ್ಲಿ ನೀತಿಯೇ ಪ್ರಧಾನವಾಗಿ ಅದು ‘ನೀತಿ ಸಾಹಿತ್ಯ’ವಾಗುತ್ತದೆಯೇ ಹೊರತು ಮಕ್ಕಳ ಸಾಹಿತ್ಯವಾಗಲಾರದು.

ಹೀಗಾಗಿ, ಮಕ್ಕಳ ಸಾಹಿತ್ಯ ರಚಿಸುವವರು ತಾವು ನಿರೂಪಿಸುವ ಕಥೆ, ಕವಿತೆ, ನಾಟಕದಲ್ಲಿ ಮಕ್ಕಳದ್ದೇ ಪ್ರೀತಿಯ ಎದೆಭಾವಕ್ಕೆ ಇಳಿದು ಬರೆಯುವ ಅಭೀಪ್ಸೆ ಹೊಂದಿರಬೇಕಾಗುತ್ತದೆ. ಆಗ ಮಕ್ಕಳಿಗಾಗಿ ಸಾಹಿತ್ಯ ರಚಿಸಲು ಕಷ್ಟವಾಗಲಾರದು. ಅದನ್ನು ಓದುವ ಮಕ್ಕಳಿಗೆ ಕೂಡ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT