‘ಕನ್ನಡ ರಾಜ್ಯೋತ್ಸವ’ವನ್ನು ‘ಕರ್ನಾಟಕ ರಾಜ್ಯೋತ್ಸವ’ ಎಂದು ಕರೆಯುವುದು ಸರಿ ಎಂಬ ಚಂದ್ರಕಾಂತ ವಡ್ಡು ಮತ್ತು ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ (ವಾ.ವಾ., ನ. 2 ಮತ್ತು 3) ಅವರ ವಾದ ತಾರ್ಕಿಕವಾಗಿ ಸರಿಯಲ್ಲ. ಕನ್ನಡ ಎಂಬ ಶಬ್ದ ಬರೀ ಭಾಷೆಯಲ್ಲ, ಅದು ನಾಡು ನುಡಿ, ಜನಾಂಗ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಕನ್ನಡ ನುಡಿ, ಕನ್ನಡ ನಾಡು, ಕನ್ನಡಿಗರು ಸರ್ವವೂ ಎನಿಸಿದೆ.