ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಚಿನ ಸ್ಥಿತಿಯೇ ಇರಲಿ!

Last Updated 27 ಸೆಪ್ಟೆಂಬರ್ 2020, 15:35 IST
ಅಕ್ಷರ ಗಾತ್ರ

ಸ್ಮಾರ್ಟ್ ಸಿಟಿ ಯೋಜನೆಯಡಿ ಕರ್ನಾಟಕದ ನಗರಗಳು ಅಭಿವೃದ್ಧಿ ಆಗುತ್ತವೆಂದು ತಿಳಿದಾಗ ಸಂತೋಷವಾಗಿತ್ತು. ನಮ್ಮ ನಗರಗಳು ಸಿಂಗಪುರ ಮತ್ತು ಹಾಂಗ್‌ಕಾಂಗ್‌ನಂತೆ ಸ್ವಚ್ಛವಾಗಿ ನಳನಳಿಸುವಂತೆ ಕನಸು ಕಂಡಿದ್ದೆವು. ಯೋಜನೆಯಡಿ ಕಾಮಗಾರಿಗಳು ಪ್ರಾರಂಭವಾದಾಗ ಕೌತುಕದಿಂದ ಹುಬ್ಬೇರಿಸಿ, ಎದೆಯೇರಿಸಿ ಸಂಭ್ರಮಿಸಿದ್ದೆವು. ಕಾಮಗಾರಿ ಮುಂದುವರಿದಂತೆ ಅದರ ಆಮೆ ವೇಗದ ಪ್ರಗತಿಯಿಂದ ಅನನುಕೂಲಗಳನ್ನು ಅನುಭವಿಸಿದಂತೆ ನಮ್ಮ ಸಂಭ್ರಮ, ಸಂತಸ, ಕುತೂಹಲ ಮತ್ತು ಕನಸುಗಳು ಒಂದೊಂದಾಗಿ ಮರೆಯಾಗತೊಡಗಿದವು. ಈಗ ನಿರಾಸೆ ಮತ್ತು ಅಸಹನೆ ಮಡುಗಟ್ಟಿವೆ.

ಈ ಎಲ್ಲಾ ಕೆಲಸಗಳನ್ನು ಕೂಡಲೇ ನಿಲ್ಲಿಸಿ, ನಮ್ಮ ರಸ್ತೆಗಳು ಮತ್ತು ಬಡಾವಣೆಗಳನ್ನು ಸ್ಮಾರ್ಟ್ ಸಿಟಿಕಾಮಗಾರಿ ಪ್ರಾರಂಭವಾಗುವುದಕ್ಕೆ ಮುಂಚೆ ಇದ್ದ ಸ್ಥಿತಿಗೆ ತಂದರೆ ಸಾಕಪ್ಪ ಅನ್ನಿಸಿದೆ.

ಡಾ. ಕೆ.ಎಸ್.ಗಂಗಾಧರ,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT