ಕೇರಳದ ತಿರುವನಂತಪುರ ಮಹಾನಗರಪಾಲಿಕೆಯ ಮೇಯರ್ ಸ್ಥಾನಕ್ಕೆ 21 ವರ್ಷದ ಆರ್ಯ ರಾಜೇಂದ್ರನ್ ಅವರನ್ನು ಸಿಪಿಎಂ ಜಿಲ್ಲಾ ಸಮಿತಿಯು ಶಿಫಾರಸು ಮಾಡಿರುವುದು (ಪ್ರ.ವಾ., ಡಿ. 26) ಸಂತೋಷದ ವಿಷಯ. ಆರ್ಯ ಅವರಂತೆ ಇಂದಿನ ಯುವಸಮೂಹವು ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಆಗಬೇಕು. ಹಾಗೆಯೇ 65 ವರ್ಷಕ್ಕೆ ರಾಜಕಾರಣಿಗಳನ್ನು ರಾಜಕೀಯದಿಂದ ನಿವೃತ್ತಿಗೊಳಿಸುವ ಕಾನೂನು ಜಾರಿಗೆ ಬರಬೇಕು. ‘ಹೊಸ ಚಿಗುರು, ಹಳೇ ಬೇರು ಕೂಡಿರಲು ಮರ ಸೊಬಗು’ ಎನ್ನುವ ಕವಿವಾಣಿಯಂತೆ ಅನುಭವಿ ರಾಜಕಾರಣಿಗಳು ಯುವ ರಾಜಕಾರಣಿಗಳಿಗೆ ದೇಶದ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಸಲಹೆ ಸೂಚನೆಗಳನ್ನು ನೀಡುತ್ತಾ ಬರಲಿ. ಒಟ್ಟಾರೆ ಇಂದಿನ ಯುವಶಕ್ತಿಯು ದೇಶವನ್ನು ಅಭಿವೃದ್ಧಿ ಪಥದ ಕಡೆ ಕೊಂಡೊಯ್ಯುವ ಆಶಾಕಿರಣವಾಗಲಿ.