ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಕಾನೂನು ತಿದ್ದುಪಡಿಗೆ ಸಲಹೆ ನೀಡಲಿ

Last Updated 27 ಆಗಸ್ಟ್ 2020, 18:40 IST
ಅಕ್ಷರ ಗಾತ್ರ

ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ (ರೇರಾ) ಅಡಿ ನೋಂದಾಯಿಸಿದ ಯೋಜನೆಗಳು ಗಡುವಿನೊಳಗೆ ಮುಗಿಯದೆ ಖರೀದಿದಾರರಿಗೆ ‘ಮನೆಯೂ ಇಲ್ಲ, ಹಣವೂ ಇಲ್ಲ’ ಎಂಬ ವರದಿಯು (ಪ್ರ.ವಾ., ಆ. 25) ಮುಂಗಡ ಹಣ ಪಾವತಿಸಿ ಮನೆಗಾಗಿ ಕಾಯುತ್ತಿರುವವರ ಅಳಲನ್ನು ತೆರೆದಿಟ್ಟಿದೆ. ಬಿಲ್ಡರ್‌ಗಳ ಬೇಜವಾಬ್ದಾರಿಗೆ ರೇರಾವನ್ನು ದೂರುವುದು ಸರಿಯಲ್ಲ ಎಂದು ರೇರಾದ ಕಾರ್ಯದರ್ಶಿ ಹೇಳಿದ್ದಾರೆ. ಇದರಿಂದ, ಬಿಲ್ಡರ್‌ಗಳು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂಬುದನ್ನು ಒಪ್ಪಿಕೊಂಡಂತೆ ಆಯಿತಲ್ಲವೇ? ಅದಕ್ಕಾಗಿ ಪ್ರಾಧಿಕಾರವನ್ನಲ್ಲದೆ ಮತ್ಯಾರನ್ನು ದೂರಬೇಕು?

ರೇರಾ ಆದೇಶಿಸಬಹುದೇ ವಿನಾ ಜಾರಿಗೊಳಿಸಬೇಕಾದುದುಕಂದಾಯ ಇಲಾಖೆ ಮತ್ತು ಪ್ರಾಜೆಕ್ಟ್‌ನ ಸಮಯ ವಿಸ್ತರಿಸುವಾಗ ಗ್ರಾಹಕರನ್ನು ಕೇಳಲೇಬೇಕೆಂದೇನೂ ಕಾಯ್ದೆಯಲ್ಲಿ ಇಲ್ಲ ಎಂಬ ಹೇಳಿಕೆಗಳು ಅವರ ಅಸಹಾಯಕತೆಯನ್ನೋ ಇಲ್ಲವೇ ರೇರಾ, ಬಿಲ್ಡರ್‌ಗಳ ಪರ ಇದೆಯೇ ಎಂಬ ಸಂದೇಹವನ್ನೋ ಸೂಚಿಸುತ್ತವೆ. ಪ್ರಾಜೆಕ್ಟ್‌ನ ಸಮಯ ವಿಸ್ತರಿಸುವಾಗ ಖರೀದಿದಾರರ ಅಭಿಪ್ರಾಯವನ್ನು ಆಲಿಸಬೇಕಾಗಿದ್ದುದು ನ್ಯಾಯಸಮ್ಮತವಲ್ಲವೇ? ತನ್ನ ಆದೇಶವನ್ನು ಜಾರಿಗೊಳಿಸಲು ಅಡ್ಡಿಯಿದೆ ಎಂದಾದರೆ, ಕಾನೂನಿನ ತಿದ್ದುಪಡಿಗೆ ಸರ್ಕಾರಕ್ಕೆ ಅದು ಸಲಹೆ ನೀಡಬಾರದೇಕೆ?

-ಪುಟ್ಟೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT