ಉಳಿದಿರುವ ಅವಧಿಯಲ್ಲಿ ಕೇಂದ್ರ ಸರ್ಕಾರ, ಮತ್ತದರ ಮಂತ್ರಿಗಳು ಹೊಸ ಘೋಷಣೆ, ಕಾರ್ಯಕ್ರಮಗಳ ಅಥವಾ ರಾಮಮಂದಿರ ನಿರ್ಮಾಣದಂತಹ ವಿಷಯದ ಮೊರೆ ಹೋಗದೆ, ಅನುಷ್ಠಾನವಾಗದೆ ಬಾಕಿ ಉಳಿದಿರುವ ಕೆಲಸಗಳನ್ನಾದರೂ ಮುಗಿಸಲಿ. ಅನುಭವ, ಕಾರ್ಯಕ್ಷಮತೆ ಇರುವವರೂ ನಾಯಕರ ಮುಖಸ್ತುತಿಯಲ್ಲಿ ತೊಡಗಿರುವುದು ವಿಷಾದಕರ. ಮಹಾನಾಯಕರು ‘ಗ್ಲೋಬಲ್’ ಆಗುವುದಕ್ಕಿಂತ ಸ್ವದೇಶದ ಸಮಸ್ಯೆಗಳತ್ತ ಗಮನ ಹರಿಸಲಿ. ತೆರೆದ ಮನ ಇದ್ದರೆ ಪ್ರತೀ ಘಟನೆಯಿಂದಲೂ ಕಲಿಯಬಹುದಾದ ಒಂದಾದರೂ ಪಾಠ ಇರುತ್ತದೆ.