ಒಂದು ಕಡೆ ಸಾಮಾಜಿಕ ಅಸಮಾನತೆ, ಇನ್ನೊಂದು ಕಡೆ ಆರ್ಥಿಕ ಅಸಮಾನತೆ. ಇವೆರಡೂ ರಾಜಕೀಯ ಅಧಿಕಾರದ ಅಸ್ತ್ರವು ಕೆಲವರಲ್ಲಷ್ಟೇ ಕೇಂದ್ರೀಕೃತವಾಗುವಂತೆ ಮಾಡಿವೆ. ಇದು ಹೀಗೇ ಮುಂದುವರಿದರೆ ಸಾಮಾನ್ಯ ಜನರ ಸ್ಥಿತಿ ಕರುಣಾಜನಕ ಆಗುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ, ಅಧಿಕಾರವನ್ನು ಅಸಮಾನತೆ ನಿವಾರಣೆಗಾಗಿ ಬಳಸಬೇಕಾದ ಜರೂರತ್ತು ಎಂದಿಗಿಂತ ಇಂದು ಇದೆ.
–ಬಿ.ಆರ್.ಅಣ್ಣಾಸಾಗರ,ಸೇಡಂ