ದೇಶದ ಸಾವಿರಾರು ಬುದ್ಧಿಜೀವಿಗಳು, ವಿಜ್ಞಾನಿಗಳಿಗೆ ನದಿ ಮಾಲಿನ್ಯಕ್ಕೆ ಪರಿಹಾರ ತಿಳಿದಿಲ್ಲವೇ? ಒಳಚರಂಡಿಗೆ ಪರ್ಯಾಯ ಸಂಶೋಧನೆ ಮಾಡಿಲ್ಲವೇ? ದೇಶದ ಉಚಿತ ಜಲಮೂಲಗಳನ್ನು ಮಲಿನಗೊಳಿಸಿ ನೀರಿಗೆ ಹಾಹಾಕಾರ ಸೃಷ್ಟಿಸಿ ಹಣ ಲೂಟಿ ಮಾಡುವ ಹುನ್ನಾರವೇ? ಮಹಾತ್ಮ ಗಾಂಧಿಯವರ ಸಲಹೆಯಂತೆ, ಮನೆಗೆ ಎರಡು ಇಂಗುಗುಂಡಿ ವ್ಯವಸ್ಥೆ ಮಾಡಿ, ಮಲಮೂತ್ರ ಮತ್ತು ತ್ಯಾಜ್ಯವನ್ನು ಜೈವಿಕ ಅನಿಲ ಯಂತ್ರಕ್ಕೆ ಸೇರಿಸುವ ಮೂಲಕ ಅತ್ಯಮೂಲ್ಯ ಸಾವಯವ ಗೊಬ್ಬರ ಪಡೆಯಬಹುದು. ದೇಶದ ನದಿ ಮಾಲಿನ್ಯ ತಡೆಯಲು ಇದೇ ಉತ್ತಮ ಮಾರ್ಗವಾಗಿದೆ.