ನಗರಗಳ ಆಸುಪಾಸು ಗಿಡಗಳನ್ನು ನೆಟ್ಟ ಕೂಡಲೇ ಆ ಪ್ರದೇಶದ ಜೀವವೈವಿಧ್ಯ ನಾಶವಾಗುವುದೇ? ಹಾಗಾದರೆ ಅರಣ್ಯ ನಾಶದಿಂದಾಗುತ್ತಿರುವ ಜೀವವೈವಿಧ್ಯ ಹಾನಿಗೆ ಪರಿಹಾರೋಪಾಯಗಳೇನು? ಈ ವಿವರಗಳೂ ಇದ್ದಿದ್ದರೆ ಲೇಖನಕ್ಕೆ ಸಮಗ್ರತೆ ದಕ್ಕುತ್ತಿತ್ತು. ಜನಸಾಮಾನ್ಯರಿಂದ ವೈಜ್ಞಾನಿಕವಾಗಿ ಅರಣ್ಯ ನಿರ್ಮಿಸುವುದು ಸಾಧ್ಯವೇ ಎಂಬ ಪ್ರಶ್ನೆಯೂ ಏಳುತ್ತದೆ.ಆಲ, ಅರಳಿ, ಬಸರಿ ಮುಂತಾದ ಗಿಡಗಳು ರಾಜ್ಯದೆಲ್ಲೆಡೆ ಬೆಳೆಯುತ್ತವೆ. ಅವು ನೂರಾರು ಜೀವಿಗಳಿಗೆ ಆಶ್ರಯ ನೀಡುತ್ತವಲ್ಲವೇ? ಅಕೇಶಿಯಾ ಮತ್ತು ನೀಲಗಿರಿ ನೆಡುತೋಪುಗಳಿಂದ ಆಗುತ್ತಿರುವ ಹಾನಿಯ ವಿಶ್ಲೇಷಣೆ ಏನು?