ಈ ಬಾರಿಯ ಮುಂಗಾರಿನ ಆರ್ಭಟ ಬಹಳ ಬಿರುಸಾಗಿದ್ದು, ಇಡೀ ಕರುನಾಡನ್ನು ಜಲಾಘಾತದಿಂದ ನಲುಗಿಸಿದೆ. ಕೋಡಿ ಬಿದ್ದಿರುವ ಕೆರೆ ಕಟ್ಟೆಗಳು, ನಾವು ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಮುಂದೆ ಹೋಗಲಾರೆವು ಎಂಬುದನ್ನು ಮತ್ತೆ ತೋರಿಸಿಕೊಟ್ಟಿವೆ. ಬೆಂಗಳೂರಿನ ಒಂದಷ್ಟು ಭಾಗಗಳು ದ್ವೀಪದಂತೆ ಆಗಿರುವುದು ನಮ್ಮ ದುರಾಸೆಯ ಫಲವೇ ಆಗಿದೆ. ಕೆರೆಗಳಿದ್ದ ಪ್ರದೇಶಗಳಲ್ಲಿ ಬಡಾವಣೆಗಳು ತಲೆ ಎತ್ತಿರುವುದರ ಪರಿಣಾಮ ಏನೆಂಬುದು ಈ ರೀತಿಯ ರಣಭಯಂಕರ ಮಳೆ ಆದಾಗ ನಮಗೆ ಎದ್ದು ಕಾಣುತ್ತದೆ.