ದೀಪಧಾರಿಣಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಕುರಿತು ರಘುನಾಥ ಚ.ಹ. ಅವರ ಲೇಖನ (ಪ್ರ.ವಾ., ಮೇ. 12) ವರ್ತಮಾನದ ಸಂದರ್ಭಕ್ಕೆ ಅತ್ಯಂತ ಸಮಂಜಸವಾಗಿದೆ. ರೋಗಿಗಳ ಶುಶ್ರೂಷೆ ಎಂಬುದು ದೇವಪೂಜೆಗಿಂತಲೂ ಮಿಗಿಲು ಎಂದು ಭಾವಿಸಿದ್ದ ಫ್ಲಾರೆನ್ಸ್ ಎಂದೂ ಪ್ರಚಾರ ಬಯಸಿದವರಲ್ಲ. ಆದರೆ ‘ದುಗ್ಗಾಣಿ ಕೆಲಸಕ್ಕೆ ದೊರೆಯ ಸನ್ಮಾನ ಬಯಸಿದರು’ ಎನ್ನುವಂತೆ, ಇಂದಿನ ಕೆಲವು ಪ್ರಚಾರಪ್ರಿಯರ ವರ್ತನೆ ಅಸಹ್ಯ ತರುವಂತಿದೆ. ಅಂದಿನ ಫ್ಲಾರೆನ್ಸ್ರ ‘ದೀಪ’ ಮತ್ತೆ ಬೆಳಗುವಂತಾಗಲಿ.