ಕರ್ನಾಟಕದ ಗಡಿ ಭಾಗದಲ್ಲಿ, ಅದರಲ್ಲೂ ನಿಪ್ಪಾಣಿ, ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳ ಗಡಿ ಪ್ರದೇಶ ದಲ್ಲಿ ಕೆಲವು ಕನ್ನಡ ಪ್ರೌಢಶಾಲೆಗಳನ್ನು ತೆರೆಯಬೇಕೆಂಬುದು ಆ ಪ್ರದೇಶದ ಜನರ ಬಹುದಿನಗಳ ಬೇಡಿಕೆ. ಸರ್ಕಾರದ ಹೊಸ ನೀತಿಯ ಪ್ರಕಾರ, ಈ ಗ್ರಾಮಗಳಿಗೆ 8, 9 ಮತ್ತು 10ನೇ ತರಗತಿಗಳನ್ನು ‘ಮುಂದುವರಿದ ಶಿಕ್ಷಣ’ ಎಂದು ಪರಿಗಣಿಸಿ ಪ್ರೌಢ ತರಗತಿಗಳನ್ನು ಶೀಘ್ರದಲ್ಲಿ ಮಂಜೂರು ಮಾಡಬೇಕು. ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ, ಗಡಿಭಾಗದಲ್ಲಿ ಕನ್ನಡವನ್ನು ಗಟ್ಟಿಗೊಳಿಸುವ ದಿಸೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು.