ವಾಚಕರ ವಾಣಿ| ಹಕ್ಕೇ ಮೊದಲಿರಲಿ, ಬಳಿಕ ಕರ್ತವ್ಯ
ಭಾರತ ಸಂವಿಧಾನದ ಬಗ್ಗೆ ವಿವರಿಸಿರುವ ಅಬ್ದುಲ್ ರೆಹಮಾನ್ ಪಾಷ ಅವರು (ಸಂಗತ, ಜ. 26) ನಾಗರಿಕರಿಗೆ ಕರ್ತವ್ಯಗಳೇ ಹಕ್ಕುಗಳ ನಿಜವಾದ ಮೂಲವಾಗಿವೆ ಎಂದು ಹೇಳಿದ್ದಾರೆ. ವಾಸ್ತವದಲ್ಲಿ ಮನುಷ್ಯನಿಗೆ ಮೊದಲು ಬೇಕಾಗಿರುವುದು ಹಕ್ಕುಗಳು. ಸಂವಿಧಾನ ಪ್ರತಿಪಾದಿಸಿರುವ ಜೀವಿಸುವ ಹಕ್ಕು ಇಲ್ಲದೆ ಮನುಷ್ಯ ಬದುಕುವುದಕ್ಕೇ ಆಗುವುದಿಲ್ಲ, ಇನ್ನು ಅವರು ಕರ್ತವ್ಯಪಾಲನೆ ಮಾಡುವುದು ಯಾವಾಗ?
ಅಷ್ಟಕ್ಕೂ ಹಕ್ಕಿಗೂ ಕರ್ತವ್ಯಕ್ಕೂ ಪೈಪೋಟಿಯೇ ಇಲ್ಲ. ಎರಡೂ ತಮ್ಮದೇ ಆದ ಮಹತ್ವ ಹೊಂದಿವೆ. ಹಾಗೆಂದು ಅವುಗಳ ಮಧ್ಯೆ ಪೈಪೋಟಿ ಆಗಿ ಯಾವುದು ಮೇಲುಗೈ ಅಂದರೆ ಆಗ ಅವಶ್ಯವಾಗಿ ಹಕ್ಕುಗಳದೇ ಮೇಲುಗೈ ಎಂಬುದರಲ್ಲಿ ಎರಡು ಮಾತಿಲ್ಲ.
- ರಂಗಸ್ವಾಮಿ ಮಾರ್ಲಬಂಡಿ, ಪೆದ್ದ ಹರಿವಾನಂ, ಆದೋನಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.