ಸರ್ಕಾರಿ ಕೆಲಸವೆಂದರೆ ಮೇಲುಸಂಪಾದನೆಗೆ ಸರಳವಾದ ಮಾರ್ಗ ಎಂಬ ಮನೋಭಾವ ಸಮಾಜದಲ್ಲಿದೆಎಂದು ರಾಜಕುಮಾರ ಕುಲಕರ್ಣಿ ಬರೆದಿದ್ದಾರೆ (ಸಂಗತ, ಜುಲೈ 24). ಕೆಲವು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ತಿಳಿದ ತಕ್ಷಣ ಜನ ‘ಓಹ್ ಇವರು ಸುಮ್ನೆ ಇದ್ದರೂ ದುಡ್ಡು ಬರ್ತಾಇರತ್ತೆ, ಖರ್ಚಿಗಂತೂ ಮೋಸವಿಲ್ಲ, ಬರುವ ಸಂಬಳವನ್ನು ಬೇರೆ ಕಡೆ ಹೂಡಿಕೆ ಮಾಡಬಹುದು’ ಎನ್ನುವ ಸುಲಭ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಆ ನೌಕರ ‘ಇಲ್ಲ ಇಲ್ಲ, ನಾನು ಆ ರೀತಿ ಏನೂ ತಗೊಳ್ಳಲ್ಲ, ಸಂಬಳದಲ್ಲೇ ನಮ್ಮ ಜೀವನ’ ಅಂದರೂ, ‘ಹೇ ಯಾರೂ ಸಾಚಾ ಅಲ್ಲ. ಬಂದದ್ದನ್ನು ಬೇಡ ಅನ್ನದೆ, ಬರೋವಾಗ ಸಿಕ್ಕಷ್ಟು ಗಳಿಸಿ ಆರಾಮಾಗಿರಿ’ ಅನ್ನುವ ಉತ್ತರ ಬರುತ್ತದೆ.