<p>‘ಸಾರ್, ಕೊರೊನಾ ಬಂದ್ರೆ ಡೋಲೊ 650 ಮಾತ್ರೆ, ಬಿಸಿ ರಾಗಿ ಮುದ್ದೆ... ಅಯ್ಯೋ ಸಾರ್, ಅದು ಹೇಳಿಬುಟ್ಟು ಬರುತ್ತಾ...’ ಕಳೆದ ಒಂದು ತಿಂಗಳಿನಿಂದ ಈ ಸಾಲುಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿವೆ, ಅದೂ ವ್ಯಂಗ್ಯದ ಧಾಟಿಯಲ್ಲಿ. ಎಚ್.ಡಿ.ಕೋಟೆ ಸೊಬಗಿನ ಗ್ರಾಮೀಣ ಆಡುಭಾಷೆಯಲ್ಲಿ ಇದ್ದದ್ದು ಇದ್ದಂತೆ ನೇರವಾಗಿ ಹೇಳಿ, ಸುಶಿಕ್ಷಿತರೇ ನಾಚುವ ರೀತಿಯಲ್ಲಿ ಆಡಳಿತಾರೂಢ ಸರ್ಕಾರವನ್ನು ಖಾಸಗಿ ವಾಹಿನಿಯೊಂದರಲ್ಲಿ ಪ್ರಶ್ನಿಸಿದ ಯುವತಿಯೊಬ್ಬರ ಮಾತುಗಳು ಹೀಗೆ ವಿವಿಧ ಸ್ವರೂಪ<br />ಗಳಲ್ಲಿ ಟ್ರೋಲ್ ಆಗಿರುವುದು ನಾಚಿಕೆಗೇಡು.</p>.<p>ಸಮಸ್ತ ಆಡಳಿತ ವರ್ಗವನ್ನು ಪ್ರಶ್ನೆ ಮಾಡುವ ಮೂಲಕ ಈ ಯುವತಿ ಅಸಂಖ್ಯಾತ ಜನರ ಬವಣೆ, ಸಂಕಷ್ಟಗಳ ಪ್ರತಿನಿಧಿಯಂತೆ ಕಂಡುಬಂದರು. ಹೀಗೆ ದಿಟ್ಟವಾಗಿ ಪ್ರಶ್ನಿಸುವಂತಹ ಸತ್ಪ್ರಜೆಗಳ ಸಂಖ್ಯೆ ಹೆಚ್ಚಾದಾಗಲೇ ಸರ್ಕಾರಗಳು ಎಚ್ಚೆತ್ತುಕೊಂಡು ಮೈಯೆಲ್ಲಾ ಕಣ್ಣಾಗಿ ಆಡಳಿತ ನಡೆಸುವುದು. ಆದರೆ ಈ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಯುವಸಮೂಹ ಅವರ ಮಾತಿನ ಸಾರಾಂಶದ ತುಣುಕನ್ನು ವಾಕರಿಕೆ ಬರುವ ಮಟ್ಟಕ್ಕೆ ಚಿತ್ರ-ವಿಚಿತ್ರ ಭಂಗಿಯಲ್ಲಿ ಆಡಿಕೊಳ್ಳುತ್ತಿರುವುದು ವಿಪರ್ಯಾಸ. ಯುವಸಮೂಹ ವೈಚಾರಿಕ ಚಿಂತನೆಗಳನ್ನು ಮೊದಲು ರೂಢಿಸಿಕೊಳ್ಳಬೇಕಿದೆ. ಸಾಧ್ಯವಾದರೆ ಈ ಯುವತಿಗೆ ಹಾಗೂ ಅವರ ವಟಾರಕ್ಕೆ ಕೈಲಾದಷ್ಟು ಆರ್ಥಿಕ ಸಹಾಯ ನೀಡಲು, ಸರ್ಕಾರದ ಮಟ್ಟದಲ್ಲಿ ಅಗತ್ಯ ಮೂಲ ಸೌಕರ್ಯ ಗಳನ್ನು ಒದಗಿಸಲು ಮುಂದಾಗಬೇಕಿದೆ.</p>.<p><strong>- ಅನಿಲ್ ಕುಮಾರ್,ನಂಜನಗೂಡು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಸಾರ್, ಕೊರೊನಾ ಬಂದ್ರೆ ಡೋಲೊ 650 ಮಾತ್ರೆ, ಬಿಸಿ ರಾಗಿ ಮುದ್ದೆ... ಅಯ್ಯೋ ಸಾರ್, ಅದು ಹೇಳಿಬುಟ್ಟು ಬರುತ್ತಾ...’ ಕಳೆದ ಒಂದು ತಿಂಗಳಿನಿಂದ ಈ ಸಾಲುಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿವೆ, ಅದೂ ವ್ಯಂಗ್ಯದ ಧಾಟಿಯಲ್ಲಿ. ಎಚ್.ಡಿ.ಕೋಟೆ ಸೊಬಗಿನ ಗ್ರಾಮೀಣ ಆಡುಭಾಷೆಯಲ್ಲಿ ಇದ್ದದ್ದು ಇದ್ದಂತೆ ನೇರವಾಗಿ ಹೇಳಿ, ಸುಶಿಕ್ಷಿತರೇ ನಾಚುವ ರೀತಿಯಲ್ಲಿ ಆಡಳಿತಾರೂಢ ಸರ್ಕಾರವನ್ನು ಖಾಸಗಿ ವಾಹಿನಿಯೊಂದರಲ್ಲಿ ಪ್ರಶ್ನಿಸಿದ ಯುವತಿಯೊಬ್ಬರ ಮಾತುಗಳು ಹೀಗೆ ವಿವಿಧ ಸ್ವರೂಪ<br />ಗಳಲ್ಲಿ ಟ್ರೋಲ್ ಆಗಿರುವುದು ನಾಚಿಕೆಗೇಡು.</p>.<p>ಸಮಸ್ತ ಆಡಳಿತ ವರ್ಗವನ್ನು ಪ್ರಶ್ನೆ ಮಾಡುವ ಮೂಲಕ ಈ ಯುವತಿ ಅಸಂಖ್ಯಾತ ಜನರ ಬವಣೆ, ಸಂಕಷ್ಟಗಳ ಪ್ರತಿನಿಧಿಯಂತೆ ಕಂಡುಬಂದರು. ಹೀಗೆ ದಿಟ್ಟವಾಗಿ ಪ್ರಶ್ನಿಸುವಂತಹ ಸತ್ಪ್ರಜೆಗಳ ಸಂಖ್ಯೆ ಹೆಚ್ಚಾದಾಗಲೇ ಸರ್ಕಾರಗಳು ಎಚ್ಚೆತ್ತುಕೊಂಡು ಮೈಯೆಲ್ಲಾ ಕಣ್ಣಾಗಿ ಆಡಳಿತ ನಡೆಸುವುದು. ಆದರೆ ಈ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಯುವಸಮೂಹ ಅವರ ಮಾತಿನ ಸಾರಾಂಶದ ತುಣುಕನ್ನು ವಾಕರಿಕೆ ಬರುವ ಮಟ್ಟಕ್ಕೆ ಚಿತ್ರ-ವಿಚಿತ್ರ ಭಂಗಿಯಲ್ಲಿ ಆಡಿಕೊಳ್ಳುತ್ತಿರುವುದು ವಿಪರ್ಯಾಸ. ಯುವಸಮೂಹ ವೈಚಾರಿಕ ಚಿಂತನೆಗಳನ್ನು ಮೊದಲು ರೂಢಿಸಿಕೊಳ್ಳಬೇಕಿದೆ. ಸಾಧ್ಯವಾದರೆ ಈ ಯುವತಿಗೆ ಹಾಗೂ ಅವರ ವಟಾರಕ್ಕೆ ಕೈಲಾದಷ್ಟು ಆರ್ಥಿಕ ಸಹಾಯ ನೀಡಲು, ಸರ್ಕಾರದ ಮಟ್ಟದಲ್ಲಿ ಅಗತ್ಯ ಮೂಲ ಸೌಕರ್ಯ ಗಳನ್ನು ಒದಗಿಸಲು ಮುಂದಾಗಬೇಕಿದೆ.</p>.<p><strong>- ಅನಿಲ್ ಕುಮಾರ್,ನಂಜನಗೂಡು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>