ಹೀಗೆ ನಿರ್ಬಂಧ ವಿಧಿಸುವುದು ಎಷ್ಟು ಸರಿ? ಅದರ ಬದಲು, ಆ ಸಂದರ್ಭದಲ್ಲಿ ದೇವರ ದರ್ಶನದ ಜತೆಗೆ ದೂರದರ್ಶಕದ ಮೂಲಕ ಗ್ರಹಣ ವೀಕ್ಷಿಸಲು ವ್ಯವಸ್ಥೆ ಮಾಡುವ ಔದಾರ್ಯವನ್ನು ದೇವಾಲಯಗಳು ತೋರಬೇಕಿದೆ. ಈ ಮೂಲಕ ಮೌಢ್ಯದ ಪೊರೆ ಕಳಚಿ ಜನರಲ್ಲಿ ಜಾಗೃತಿ, ವೈಚಾರಿಕ ಮನೋಭಾವ ಮೂಡಿಸಲು ನಮ್ಮ ಶ್ರದ್ಧಾ ಕೇಂದ್ರಗಳು ಶ್ರಮಿಸಿದಂತೆ ಆಗುತ್ತದೆ.