ಚುನಾವಣೆಯನ್ನು ದಿಟ್ಟವಾಗಿ ಎದುರಿಸುವುದು ಹೇಗೆ ಎಂಬುದನ್ನು ಪಶ್ಚಿಮ ಬಂಗಾಳದ ನಾಯಕಿ ಮಮತಾ ಬ್ಯಾನರ್ಜಿ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ. ತಮ್ಮ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕುವ ಧೀರರೇ ದೇಶದಲ್ಲಿ ಇಲ್ಲ ಎಂದುಕೊಂಡಿದ್ದ ‘ಚುನಾವಣಾ-ಚತುರ’ ಜೋಡಿಗೆ ಸೋಲು ಉಣಿಸಿದ್ದಾರೆ. 200ಕ್ಕೂ ಅಧಿಕ ಸ್ಥಾನಗಳನ್ನು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ತಂದುಕೊಟ್ಟು, ಹೆಣ್ಣುಮಕ್ಕಳು ಸಬಲರು ಎಂಬುದನ್ನು ಇಂದಿರಾ ಗಾಂಧಿಯವರ ನಂತರ ಸಮರ್ಥವಾಗಿ ತೋರಿಸಿಕೊಟ್ಟ ನಾಯಕಿಯಾಗಿದ್ದಾರೆ. ಬಹಳ ಮುಖ್ಯವಾಗಿ, ಈ ನಾಯಕಿಯ ಪಾದರಸದಂತಹ ಗುಣ ಮತ್ತು ಸರಳವಾದ ವ್ಯಕ್ತಿತ್ವವು ಪಕ್ಷಾತೀತವಾದ ಪ್ರಶಂಸೆ ಪಡೆಯಲು ಯೋಗ್ಯವಾದುದು.