ಸ್ವತಃ ಕೆಎಂಎಫ್ ಸೂಚಿಸಿರುವಂತೆ, ಸರ್ಕಾರ ತನ್ನ ಕ್ಷೀರಭಾಗ್ಯ, ಬಿಸಿಯೂಟದಂತಹ ಯೋಜನೆಗಳಿಗೆ ಮೀಸಲಿಟ್ಟ ಹಣದಿಂದ ಹಾಲಿನ ಪುಡಿಯನ್ನು ಖರೀದಿಸಿ ಎಲ್ಲಾ ಮಕ್ಕಳಿಗೆ ಹಾಗೂ ಪಡೆಯಲಿಚ್ಛಿಸುವ ಕುಟುಂಬಗಳಿಗೆ ಉಚಿತವಾಗಿ ಹಂಚಲು ಮುಂದಾಗಬೇಕು. ಇದರಿಂದ ರೈತರಿಗೂ ಅನುಕೂಲ, ಹಾಲು ಕೂಡ ಸದ್ಬಳಕೆಯಾಗುವುದು. ಅದೂ ಅಲ್ಲದೆ ಕೊರೊನಾ ಮೂರನೇ ಅಲೆಯ ಹೊಡೆತವನ್ನು ಎದುರಿಸಲು ಮುಖ್ಯವಾಗಿ ಮಕ್ಕಳಿಗೆ ಶಕ್ತಿ ಬರುವುದು.