ಕರ್ನಾಟಕದಲ್ಲಿ ಒಂದು ಕೋಟಿ ರಾಷ್ಟ್ರಧ್ವಜಗಳನ್ನು ಮನೆ ಮನೆಗಳಲ್ಲಿ ಹಾರಾಟ ಮಾಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇತರ ಮಂತ್ರಿಗಳು, ಶಾಸಕರು, ಪ್ರಮುಖ ಕಾರ್ಯಕರ್ತರು ಇದೇ ಉತ್ಸಾಹ ತೋರುತ್ತಿದ್ದಾರೆ. ಈ ಉತ್ಸಾಹ ಇಡೀ ದೇಶದಲ್ಲಿ ಕಾಣುತ್ತಿದೆ. ಆಗಸ್ಟ್ 15ರಂದು ಈ ರಾಷ್ಟ್ರಧ್ವಜಗಳು ದೇಶದ ತುಂಬಾ ಹಾರಾಟ ಕಂಡ ಮೇಲೆ, ಅವುಗಳ ವಿಲೇವಾರಿ ಹೇಗೆ? ಚುನಾವಣಾ ಸಾಮಗ್ರಿಗಳು ಪ್ರಚಾರ ಸಭೆ ಮುಗಿದ ಮೇಲೆ, ಹಾದಿ ಬೀದಿ ಕಸ ಆಗುವುದನ್ನು ನಾವು ಕಂಡಿದ್ದೇವೆ.