ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರತೀ ಮನೆಯಲ್ಲಿ ತಿರಂಗಾ ಧ್ವಜ ಹಾರಿಸಬೇಕು ಎನ್ನುವ ಸರ್ಕಾರದ ಸೂಚನೆ ಸ್ವಾಗತಾರ್ಹ. ಇದನ್ನು ಯಶಸ್ವಿಗೊಳಿಸಲು ಪ್ರತೀ ಮನೆಗೆ ಉಚಿತವಾಗಿ ರಾಷ್ಟ್ರಧ್ಜಜವನ್ನು ಹಂಚಬೇಕಾಗಿತ್ತು. ಆದರೆ ಇದನ್ನು ಸಾಕಾರಗೊಳಿಸಲು ಅಂಚೆ ಕಚೇರಿಗಳಿಗೆ ಗುರಿ ನೀಡಲಾಗಿದೆಯಂತೆ.
ಹರಿಯಾಣದಲ್ಲಿ ಅತಿ ಉತ್ಸಾಹಿ ರೇಷನ್ ಅಂಗಡಿಯವರೊಬ್ಬರು, ಧ್ವಜ ಖರೀದಿಸದಿದ್ದರೆ ರೇಷನ್ ಇಲ್ಲ ಎಂದು ಹೇಳಿದ್ದು ಸುದ್ದಿಮಾಧ್ಯಮದಲ್ಲಿ ವೈರಲ್ ಅಗಿದೆ. ಇಂತಹ ಒತ್ತಾಯವು ಅಮೃತ ಮಹೋತ್ಸವದ ಉತ್ಸಾಹಕ್ಕೆ ತಣ್ಣೀರು ಎರಚುತ್ತದೆ. ಈ ಬಗೆಯ ಕಾರ್ಯಗಳು ಸ್ವಯಂಪ್ರೇರಣೆಯಿಂದ ಆಗಬೇಕೆ ವಿನಾ ಒತ್ತಾಯದಿಂದ ಅಲ್ಲ.