ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಟ್ಟಿದ್ದುದು ಸಜೀವ ಬಾಂಬ್ ಅಲ್ಲ, ಪಟಾಕಿ ಪುಡಿ ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಜ. 22). ಅದು ಪಟಾಕಿ ಪುಡಿ ಎಂಬ ನಿರ್ಧಾರಕ್ಕೆ ಬರಲು ಕಾರಣವಾದ ಖಚಿತ ಸಾಕ್ಷ್ಯಾಧಾರಗಳು ತಮ್ಮ ಬಳಿ ಇದ್ದರೆ ಅವರು ತನಿಖಾ ಸಂಸ್ಥೆಗೆ ಅದನ್ನು ನೀಡಬೇಕು.