<p>ಲಾಕ್ಡೌನ್ನ ಈ ಸಮಯದಲ್ಲಿ ಕಿರಾಣಿ, ಕಾಯಿಪಲ್ಲೆ, ಕಟ್ಟಡ ನಿರ್ಮಾಣ ಸಾಮಗ್ರಿ, ಮಾಂಸ ಮತ್ತು ಮದ್ಯದಂತಹ ಕೆಲವು ಅಂಗಡಿಗಳಿಗೆ ವ್ಯಾಪಾರಕ್ಕೆ ಕೆಲವೇ ತಾಸುಗಳ ಅವಕಾಶ ಕಲ್ಪಿಸಲಾಗಿದೆ. ಉಳಿದ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಪೂರ್ತಿಯಾಗಿ ಬಂದ್ ಮಾಡಬೇಕಾಗಿದೆ. ಆದರೆ ಇ-ಕಾಮರ್ಸ್ ಸಂಸ್ಥೆಗಳು ಮಾತ್ರ ತಮ್ಮ ವಸ್ತುಗಳನ್ನು ದಿನವಿಡೀ ಜನರಿಗೆ ಪೂರೈಸುತ್ತಿದ್ದು ಅವುಗಳ ವ್ಯಾಪಾರ ವೃದ್ಧಿಯಾಗಿದೆ. ಭವಿಷ್ಯದಲ್ಲಿ ಜನರಿಗೆ<br />ಇದೇ ರೂಢಿಯಾಗಿ, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ವಹಿವಾಟಿನಲ್ಲಿ ತೀವ್ರ ಹೊಡೆತ ಬೀಳುವ ಆತಂಕ ಮನೆ<br />ಮಾಡುತ್ತಿದೆ. ಈ ನೀತಿಯು ಇ– ಕಾಮರ್ಸ್ ವ್ಯಾಪಾರಿಗಳು ಮತ್ತು ಸಾಮಾನ್ಯ ವ್ಯಾಪಾರಸ್ಥರ ನಡುವೆ ತಾರತಮ್ಯ ಉಂಟು ಮಾಡುತ್ತಿದೆ.</p>.<p>ದೇಶದಲ್ಲಿ ಕೃಷಿಯ ನಂತರ ಹೆಚ್ಚಿನ ಜನರಿಗೆ ಉದ್ಯೋಗ ಕೊಡುವುದು ಚಿಲ್ಲರೆ ವ್ಯಾಪಾರ. ಕೋವಿಡ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ವ್ಯಾಪಾರಸ್ಥರ ಹಿತ ಕಾಯುವ ನೀತಿಗಳನ್ನು ರೂಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹತ್ವದ ಪಾತ್ರ ವಹಿಸಬೇಕು.</p>.<p><strong>-ಉದಯ ಮ. ಯಂಡಿಗೇರಿ,ಧಾರವಾಡ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಾಕ್ಡೌನ್ನ ಈ ಸಮಯದಲ್ಲಿ ಕಿರಾಣಿ, ಕಾಯಿಪಲ್ಲೆ, ಕಟ್ಟಡ ನಿರ್ಮಾಣ ಸಾಮಗ್ರಿ, ಮಾಂಸ ಮತ್ತು ಮದ್ಯದಂತಹ ಕೆಲವು ಅಂಗಡಿಗಳಿಗೆ ವ್ಯಾಪಾರಕ್ಕೆ ಕೆಲವೇ ತಾಸುಗಳ ಅವಕಾಶ ಕಲ್ಪಿಸಲಾಗಿದೆ. ಉಳಿದ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಪೂರ್ತಿಯಾಗಿ ಬಂದ್ ಮಾಡಬೇಕಾಗಿದೆ. ಆದರೆ ಇ-ಕಾಮರ್ಸ್ ಸಂಸ್ಥೆಗಳು ಮಾತ್ರ ತಮ್ಮ ವಸ್ತುಗಳನ್ನು ದಿನವಿಡೀ ಜನರಿಗೆ ಪೂರೈಸುತ್ತಿದ್ದು ಅವುಗಳ ವ್ಯಾಪಾರ ವೃದ್ಧಿಯಾಗಿದೆ. ಭವಿಷ್ಯದಲ್ಲಿ ಜನರಿಗೆ<br />ಇದೇ ರೂಢಿಯಾಗಿ, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ವಹಿವಾಟಿನಲ್ಲಿ ತೀವ್ರ ಹೊಡೆತ ಬೀಳುವ ಆತಂಕ ಮನೆ<br />ಮಾಡುತ್ತಿದೆ. ಈ ನೀತಿಯು ಇ– ಕಾಮರ್ಸ್ ವ್ಯಾಪಾರಿಗಳು ಮತ್ತು ಸಾಮಾನ್ಯ ವ್ಯಾಪಾರಸ್ಥರ ನಡುವೆ ತಾರತಮ್ಯ ಉಂಟು ಮಾಡುತ್ತಿದೆ.</p>.<p>ದೇಶದಲ್ಲಿ ಕೃಷಿಯ ನಂತರ ಹೆಚ್ಚಿನ ಜನರಿಗೆ ಉದ್ಯೋಗ ಕೊಡುವುದು ಚಿಲ್ಲರೆ ವ್ಯಾಪಾರ. ಕೋವಿಡ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ವ್ಯಾಪಾರಸ್ಥರ ಹಿತ ಕಾಯುವ ನೀತಿಗಳನ್ನು ರೂಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹತ್ವದ ಪಾತ್ರ ವಹಿಸಬೇಕು.</p>.<p><strong>-ಉದಯ ಮ. ಯಂಡಿಗೇರಿ,ಧಾರವಾಡ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>