ಹೀಗೆ ಆಯ್ಕೆಯಾದವರು ಎಂತಹ ಸಮಾಜವನ್ನು ಕಟ್ಟಿಯಾರು? ಇಂತಹವರನ್ನೆಲ್ಲಾ ‘ಜಯಶಾಲಿ’ಗಳು ಎಂದು ಹೇಳಬಹುದೇ ಎಂಬ ಕುರಿತು ಸುಪ್ರೀಂ ಕೋರ್ಟ್ ಇನ್ನು ಕೆಲವೇ ದಿನಗಳಲ್ಲಿ ಮಹತ್ವದ ತೀರ್ಪು ನೀಡಲಿದೆಯಂತೆ. ದುರ್ಬಲಗೊಳ್ಳುತ್ತಲೇ ಹೋಗುತ್ತಿರುವ ಪ್ರಜಾತಂತ್ರಕ್ಕೆ, ಇತಿಹಾಸವನ್ನೇ ಸೃಷ್ಟಿಸಬಲ್ಲ ಇಂತಹ ತೀರ್ಪುಗಳು ತುರ್ತಾಗಿ ಬೇಕಾಗಿರುವ ಕಾಲವಿದು.