<p>ನೂತನ ಸಂಸತ್ ಸದಸ್ಯರ ಅಪರಾಧ ಚರಿತ್ರೆ ಕುರಿತ ಕೆ.ವಿ.ಧನಂಜಯ ಅವರ ಲೇಖನ (ಪ್ರ.ವಾ., ಜೂನ್ 10) ಮಾಹಿತಿಪೂರ್ಣವಾಗಿದೆ.ರಾಜಕಾರಣಿಗಳು ಹಣ ಬಲದಿಂದ ಕಾನೂನನ್ನು ತಮಗೆ ಬೇಕಾದಂತೆ ತಿರುಚಿ ಶೋಷಣೆಗೆ ಒಳಪಡಿಸುತ್ತಲೇ ಇದ್ದಾರೆ. ಇದಲ್ಲದೆ ಸರ್ಕಾರಗಳು ಕೋರ್ಟಿನ ಆದೇಶಗಳನ್ನು ನಿರ್ಲಕ್ಷಿಸುವುದು ಸರ್ವೇಸಾಮಾನ್ಯವಾಗಿದೆ.</p>.<p>ಹೀಗಾಗಿ ‘ರಾಜಕಾರಣ ಎಂಬುದು ದುಷ್ಟರ ಕಡೆಯ ಆಶ್ರಯತಾಣ’ ಎಂಬ ಮಾತು ನೆನಪಾಗುತ್ತದೆ. ಇದು ಎಲ್ಲ ರಾಜಕಾರಣಿಗಳಿಗೆ ಅನ್ವಯಿಸುವುದಿಲ್ಲವಾದರೂ, ಅಪರಾಧ ಹಿನ್ನೆಲೆಯ ಶೇ 43ರಷ್ಟು ಸದಸ್ಯರುಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಯಶಾಲಿಗಳಾಗಿರುವುದು ಗಾಬರಿ ಹುಟ್ಟಿಸುವಂತಹದ್ದು.</p>.<p>ಹೀಗೆ ಆಯ್ಕೆಯಾದವರು ಎಂತಹ ಸಮಾಜವನ್ನು ಕಟ್ಟಿಯಾರು? ಇಂತಹವರನ್ನೆಲ್ಲಾ ‘ಜಯಶಾಲಿ’ಗಳು ಎಂದು ಹೇಳಬಹುದೇ ಎಂಬ ಕುರಿತು ಸುಪ್ರೀಂ ಕೋರ್ಟ್ ಇನ್ನು ಕೆಲವೇ ದಿನಗಳಲ್ಲಿ ಮಹತ್ವದ ತೀರ್ಪು ನೀಡಲಿದೆಯಂತೆ. ದುರ್ಬಲಗೊಳ್ಳುತ್ತಲೇ ಹೋಗುತ್ತಿರುವ ಪ್ರಜಾತಂತ್ರಕ್ಕೆ, ಇತಿಹಾಸವನ್ನೇ ಸೃಷ್ಟಿಸಬಲ್ಲ ಇಂತಹ ತೀರ್ಪುಗಳು ತುರ್ತಾಗಿ ಬೇಕಾಗಿರುವ ಕಾಲವಿದು.</p>.<p><em><strong>-ಸಿದ್ರಾಮಪ್ಪ ದಿನ್ನಿ,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನೂತನ ಸಂಸತ್ ಸದಸ್ಯರ ಅಪರಾಧ ಚರಿತ್ರೆ ಕುರಿತ ಕೆ.ವಿ.ಧನಂಜಯ ಅವರ ಲೇಖನ (ಪ್ರ.ವಾ., ಜೂನ್ 10) ಮಾಹಿತಿಪೂರ್ಣವಾಗಿದೆ.ರಾಜಕಾರಣಿಗಳು ಹಣ ಬಲದಿಂದ ಕಾನೂನನ್ನು ತಮಗೆ ಬೇಕಾದಂತೆ ತಿರುಚಿ ಶೋಷಣೆಗೆ ಒಳಪಡಿಸುತ್ತಲೇ ಇದ್ದಾರೆ. ಇದಲ್ಲದೆ ಸರ್ಕಾರಗಳು ಕೋರ್ಟಿನ ಆದೇಶಗಳನ್ನು ನಿರ್ಲಕ್ಷಿಸುವುದು ಸರ್ವೇಸಾಮಾನ್ಯವಾಗಿದೆ.</p>.<p>ಹೀಗಾಗಿ ‘ರಾಜಕಾರಣ ಎಂಬುದು ದುಷ್ಟರ ಕಡೆಯ ಆಶ್ರಯತಾಣ’ ಎಂಬ ಮಾತು ನೆನಪಾಗುತ್ತದೆ. ಇದು ಎಲ್ಲ ರಾಜಕಾರಣಿಗಳಿಗೆ ಅನ್ವಯಿಸುವುದಿಲ್ಲವಾದರೂ, ಅಪರಾಧ ಹಿನ್ನೆಲೆಯ ಶೇ 43ರಷ್ಟು ಸದಸ್ಯರುಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಯಶಾಲಿಗಳಾಗಿರುವುದು ಗಾಬರಿ ಹುಟ್ಟಿಸುವಂತಹದ್ದು.</p>.<p>ಹೀಗೆ ಆಯ್ಕೆಯಾದವರು ಎಂತಹ ಸಮಾಜವನ್ನು ಕಟ್ಟಿಯಾರು? ಇಂತಹವರನ್ನೆಲ್ಲಾ ‘ಜಯಶಾಲಿ’ಗಳು ಎಂದು ಹೇಳಬಹುದೇ ಎಂಬ ಕುರಿತು ಸುಪ್ರೀಂ ಕೋರ್ಟ್ ಇನ್ನು ಕೆಲವೇ ದಿನಗಳಲ್ಲಿ ಮಹತ್ವದ ತೀರ್ಪು ನೀಡಲಿದೆಯಂತೆ. ದುರ್ಬಲಗೊಳ್ಳುತ್ತಲೇ ಹೋಗುತ್ತಿರುವ ಪ್ರಜಾತಂತ್ರಕ್ಕೆ, ಇತಿಹಾಸವನ್ನೇ ಸೃಷ್ಟಿಸಬಲ್ಲ ಇಂತಹ ತೀರ್ಪುಗಳು ತುರ್ತಾಗಿ ಬೇಕಾಗಿರುವ ಕಾಲವಿದು.</p>.<p><em><strong>-ಸಿದ್ರಾಮಪ್ಪ ದಿನ್ನಿ,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>