ಈ ಬಾರಿಯ ಸಂಕ್ರಾಂತಿಯಂದು ಬೆಂಗಳೂರಿನ ಗವಿಪುರದ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿನ ಶಿವಲಿಂಗದ ಮೇಲೆ ಸೂರ್ಯರಶ್ಮಿ ಬೀಳದೇ ಇದ್ದದ್ದಕ್ಕೆ ಮೋಡಗಳು ಅಡ್ಡ ಬಂದದ್ದೇ ಕಾರಣ ಎಂಬ ಸುದ್ದಿ(ಪ್ರ.ವಾ., ಜ. 15) ಸತ್ಯ ಮತ್ತು ವೈಜ್ಞಾನಿಕವಾದದ್ದು. ವಿಪರ್ಯಾಸವೆಂದರೆ, ವಿಜ್ಞಾನ ಎಷ್ಟೇ ಬೆಳೆದರೂ ಪ್ರಕೃತಿಯಲ್ಲಿನ ಸಾಮಾನ್ಯ ಘಟನೆಗಳಿಗೆ ಸಲ್ಲದ ಅರ್ಥ ಕಲ್ಪಿಸುವ ವಾತಾವರಣಕ್ಕೆ ಕೆಲವು ಮಾಧ್ಯಮಗಳು ಕಾರಣವಾಗುತ್ತಿವೆ.