ಇನ್ನು ಕ್ರೀಡಾಕೂಟಗಳಿಗೆ ನಡೆಯುವ ಆಯ್ಕೆ ಪ್ರಕ್ರಿಯೆಯ ಕಣ್ಣಾಮುಚ್ಚಾಲೆ ಕೇಳುವುದೇ ಬೇಡ. ಅದು ತರಬೇತುದಾರರ ಕೃಪಾಶೀರ್ವಾದ, ಸಂಘಟಕರ ದಯೆ, ರಾಜಕೀಯ ಶಿಫಾರಸು... ಹೀಗೆ ಹಲವಾರು ಅಡೆತಡೆಗಳನ್ನು ಜಿಗಿದು, ಓಡಿ, ಗುರಿ
ಮುಟ್ಟಬೇಕಾಗುತ್ತದೆ. ಇಂತಹ ಓಟದಲ್ಲಿ ನಿಜವಾದ ಸಾಮರ್ಥ್ಯವುಳ್ಳ ಆಟಗಾರರು ಹಿಂದೆ ಬೀಳುವ ಸಾಧ್ಯತೆ ಹೆಚ್ಚು. ಗ್ರಾಮೀಣ ಪ್ರದೇಶ
ಗಳಲ್ಲಿ ಇಂತಹ ಹತ್ತಾರು ಉಸೇನ್ ಬೋಲ್ಟ್ರಿದ್ದಾರೆ. ಅವರ ಸಾಮರ್ಥ್ಯವನ್ನು ತರಬೇತುದಾರರು ಗುರುತಿಸಲಿ ಮತ್ತು ಮುಕ್ತ ಅವಕಾಶ ನೀಡಲಿ.