ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರು ಸರಳವಾಗಿ ಮದುವೆ ಮಾಡಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. ಸರಳ ಮದುವೆಯಿಂದಾಗಿ ಉಳಿದ ಹತ್ತಾರು ಕೋಟಿ ರೂಪಾಯಿಯನ್ನು ಬಳಸಿ ಅವರು, ರಾಜಕೀಯ ಮುತ್ಸದ್ದಿ ಎಚ್.ಡಿ.ದೇವೇಗೌಡರ ಹೆಸರಿನಲ್ಲಿ ಮಂಡ್ಯ- ರಾಮನಗರ ಜಿಲ್ಲೆಯ ಮಧ್ಯದಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಿ. ಎಲ್ಲರಿಗೂ ಅಲ್ಲಿ ಚಿಕಿತ್ಸೆ ದೊರೆಯುವಂತೆ ಆಗಲಿ. ಈ ಮೂಲಕ ದೇವೇಗೌಡರ ಕುಟುಂಬವು ಸಮಾಜಕ್ಕೆ ಉತ್ತಮ ಸಂದೇಶ ನೀಡಲಿ.