ದಿವಂಗತ ಮಹನೀಯರ ಸಮಾಧಿ ಒಂದು ಕಡೆ, ಸ್ಮಾರಕ ಮತ್ತೊಂದು ಕಡೆ ಆದರೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಂತೆ ಆಗುತ್ತದೆ. ನಿಧನರಾದ ಗಣ್ಯ ವ್ಯಕ್ತಿಗಳನ್ನು ಅವರವರ ಸ್ವಂತ ಊರುಗಳಲ್ಲಿ ಮಣ್ಣು ಮಾಡಿ ಅಲ್ಲೊಂದು ಸ್ಮಾರಕ ನಿರ್ಮಿಸಿ, ಅದನ್ನು ಅಭಿವೃದ್ಧಿಪಡಿಸುವಂತೆ ಆಗಬೇಕು. ಕಲಾಗ್ರಾಮವನ್ನು ಕಲೆ, ಸಾಹಿತ್ಯ, ಸಂಸ್ಕೃತಿಗೆ ಮೀಸಲಿಡಲಿ. ಅಧಿಕಾರಿಗಳು, ರಾಜಕಾರಣಿಗಳು ಕೆಲವರನ್ನು ಮೆಚ್ಚಿಸಲಿಕ್ಕಾಗಿ ಆತುರದ ನಿರ್ಧಾರ ಕೈಗೊಂಡು ಇಂತಹ ಅವಾಂತರಗಳಿಗೆ ಕಾರಣರಾಗುತ್ತಿರುವುದು ಸಾಮಾನ್ಯವಾಗಿದೆ. ಇನ್ನು ಮುಂದಾದರೂ ಯೋಚಿಸಿ, ಯೋಜಿಸಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ.