ಕಳೆದ 10 ತಿಂಗಳಿನಿಂದ ಶಾಲಾ ವಿದ್ಯಾರ್ಥಿಗಳನ್ನು ಜ್ಞಾನದ ಕೊರತೆ ಕಾಡುತ್ತಿದೆ. ಶಾಲೆ ಮರೆತುಹೋಗಿದೆ. ಶಿಕ್ಷಕರ ನೇರ ಸಂಪರ್ಕ ತಪ್ಪಿದೆ. ಮಕ್ಕಳು ಅಲ್ಲಿ ಇಲ್ಲಿ ಸುತ್ತುತ್ತಾ ಕಾಲ ಕಳೆಯುವ ಬದಲು, ಶಾಲೆಗೆ ಬರಲು ಸರ್ಕಾರವು ಅಧಿಕೃತ ಆಹ್ವಾನ ಕೊಡಲಿ. ಹೆಚ್ಚಿನ ಮಕ್ಕಳಿಗೆ ಒತ್ತಾಸೆ ಇಲ್ಲದ್ದರಿಂದ ಓದಿನ ಕಡೆ ಗಮನವನ್ನೂ ಕೊಡಲಾಗದೆ, ಮನೆಯಲ್ಲಿ ಕಾಲ ಕಳೆಯಲೂ ಆಗದೆ ಮನಸ್ಸಿಗೆ ಬಂದಂತೆ ಇದ್ದಾರೆ. ಇದಕ್ಕಿಂತ ಶಾಲೆಯಲ್ಲಿ ಪಾಠ ಪ್ರವಚನಗಳನ್ನು ಕೇಳುವುದು ಒಳ್ಳೆಯದು. ಇದರಿಂದ ಅವರು ಮಾನಸಿಕವಾಗಿ ಸದೃಢರಾಗುತ್ತಾರೆ.