ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ತೆರೆಯಲಿ, ಗೊಂದಲ ದೂರವಾಗಲಿ

Last Updated 17 ಜನವರಿ 2021, 18:41 IST
ಅಕ್ಷರ ಗಾತ್ರ

ಕಳೆದ 10 ತಿಂಗಳಿನಿಂದ ಶಾಲಾ ವಿದ್ಯಾರ್ಥಿಗಳನ್ನು ಜ್ಞಾನದ ಕೊರತೆ ಕಾಡುತ್ತಿದೆ. ಶಾಲೆ ಮರೆತುಹೋಗಿದೆ. ಶಿಕ್ಷಕರ ನೇರ ಸಂಪರ್ಕ ತಪ್ಪಿದೆ. ಮಕ್ಕಳು ಅಲ್ಲಿ ಇಲ್ಲಿ ಸುತ್ತುತ್ತಾ ಕಾಲ ಕಳೆಯುವ ಬದಲು, ಶಾಲೆಗೆ ಬರಲು ಸರ್ಕಾರವು ಅಧಿಕೃತ ಆಹ್ವಾನ ಕೊಡಲಿ. ಹೆಚ್ಚಿನ ಮಕ್ಕಳಿಗೆ ಒತ್ತಾಸೆ ಇಲ್ಲದ್ದರಿಂದ ಓದಿನ ಕಡೆ ಗಮನವನ್ನೂ ಕೊಡಲಾಗದೆ, ಮನೆಯಲ್ಲಿ ಕಾಲ ಕಳೆಯಲೂ ಆಗದೆ ಮನಸ್ಸಿಗೆ ಬಂದಂತೆ ಇದ್ದಾರೆ. ಇದಕ್ಕಿಂತ ಶಾಲೆಯಲ್ಲಿ ಪಾಠ ಪ್ರವಚನಗಳನ್ನು ಕೇಳುವುದು ಒಳ್ಳೆಯದು. ಇದರಿಂದ ಅವರು ಮಾನಸಿಕವಾಗಿ ಸದೃಢರಾಗುತ್ತಾರೆ.

ಕೋವಿಡ್‌ ನಿಯಂತ್ರಣ ಕ್ರಮಗಳ ಕುರಿತಂತೆ ಶಿಕ್ಷಕರ ಮೇಲ್ವಿಚಾರಣೆ ಇರುವುದರಿಂದ ಮಕ್ಕಳು ಕೊರೊನಾ ಸೋಂಕಿನ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವುದಿಲ್ಲ. ಜೊತೆಗೆ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗಿ ಇರುವುದರಿಂದ ಅನಗತ್ಯ ಆತಂಕ ಪಡುವ ಅಗತ್ಯವೂ ಇಲ್ಲ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪೋಷಕರ ಚಿಂತೆ, ಮಕ್ಕಳ ಕಲ್ಯಾಣ, ಅವರ ಜ್ಞಾನ ವಿಕಾಸದ ಅಗತ್ಯ ಎಲ್ಲವನ್ನೂ ಪರಿಗಣಿಸಿ ಶಾಲೆಗಳನ್ನು ಆದಷ್ಟು ಬೇಗ ತೆರೆಯಬೇಕಾಗಿದೆ. ಈ ಬಗ್ಗೆ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಲಿ.

ಎಚ್.ಎಸ್.ಟಿ.ಸ್ವಾಮಿ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT